ಕುಂಬಳೆ: ವಿಶ್ವ ಕ್ಷಯರೋಗ ದಿನಾಚರಣೆ ನಿಮಿತ್ತ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾಟ್ ಕುಟುಂಬ ಸಮ್ಮಿಲನ ನಡೆಯಿತು. ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಕುಟುಂಬ ಸಮ್ಮಿಲನ ಉದ್ಘಾಟಿಸಿದರು. ಕ್ಷಯರೋಗಕ್ಕೆ ಔಷಧೋಪಚಾರದಿಂದ ಸಂಪೂರ್ಣ ಗುಣಮುಖರಾದವರು, ನೇರ ನಿಗಾದಲ್ಲಿ ಮಾತ್ರೆ ಸೇವಿಸಿದವರು, ಆರೋಗ್ಯ ಕಾರ್ಯಕರ್ತರು ತಮ್ಮ ಅನುಭವ ಹಂಚಿಕೊಂಡರು. ಪಿಂಚಣಿ ಯೋಜನೆ, ಆರೋಗ್ಯ ಇಲಾಖೆ ಆರೈಕೆ ಮತ್ತು ಪೌಷ್ಟಿಕಾಂಶದ ಕುರಿತು ಚರ್ಚಿಸಲಾಯಿತು. ಸೋಂಕು ಗಾಳಿಯ ಮೂಲಕ ಹರಡುತ್ತಿದ್ದು, ಇತರರಿಗೆ ರೋಗ ಹರಡದಂತೆ ಜಾಗೃತಿ ಮೂಡಿಸಲಾಗುವುದು ಎಂಬ ದೃಢ ಪ್ರತಿಜ್ಞೆಯೊಂದಿಗೆ ಸಭೆ ಮುಕ್ತಾಯವಾಯಿತು.
ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್ ಪ್ರತಿಜ್ಞಾವಿಧಿ ಬೋಧಿಸಿದರು. ಆರೋಗ್ಯ ನಿರೀಕ್ಷಕ ಗನ್ನಿಮೋಳ್, ಪಿಎಚ್ಎನ್ ವಿ ಕುಂಞಮಿ, ಜೆಪಿಎಚ್ಎನ್ಗಳಾದ ಎಸ್ ಶಾರದಾ ಮತ್ತು ಯು ಸಬೀನಾ, ನಸಿರ್ಂಗ್ ಅಧಿಕಾರಿ ಬಿಸ್ಮಿ, ಜೆಎಚ್ಐ ಆದರ್ಶ್ ಮತ್ತು ಆಶಾ ಕಾರ್ಯಕರ್ತೆ ವೀಣಾ ಜನಾರ್ದನ ಮಾತನಾಡಿದರು.