ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಲಿನ್ಯ ನಿಯಂತ್ರಣದತ್ತ ಚಿಂತನೆ ನಡೆಸಿದ್ದು, ಪರಿಸರಸ್ನೇಹಿ ಹೈಡ್ರೋಜನ್ ಚಾಲಿತ ಕಾರಿನತ್ತ ಒಲವು ತೋರಿದ್ದಾರೆ.
ಹೈಡ್ರೋಜನ್ ಕಾರಿನ ಪ್ರಾಮುಖ್ಯತೆ ತಿಳಿಸುವ ಸಲುವಾಗಿ ಗಡ್ಕರಿ ಅವರು ತಮ್ಮ ನಿವಾಸದಿಂದ ಸಂಸತ್ತಿಗೆ ಆಗಮಿಸಿದ್ದು ವಿಶೇಷ. ಇದು ಭಾರತದ ಮೊದಲನೆಯ ಪರಿಸರಸ್ನೇಹಿ ಹೈಡ್ರೋಜನ್ ಚಾಲಿತ ಕಾರು.
ಗಡ್ಕರಿ ಈ ಕಾರನ್ನು ಭಾರತದ ಭವಿಷ್ಯ ಎಂದು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದು 'ಸ್ವಾವಲಂಬಿ ಭಾರತವಾಗುವತ್ತ ಇದು ಒಂದು ದೊಡ್ಡ ಹೆಜ್ಜೆ' ಎಂದಿದ್ದಾರೆ.