HEALTH TIPS

ಮುಲಾಜಿಲ್ಲ: ಅಕ್ರಮವಾಗಿ ಧ್ವಜ ಹಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು: ಹೈಕೋರ್ಟ್

                       ಕೊಚ್ಚಿ: ಕೊಚ್ಚಿ ಕಾಪೆರ್Çರೇಷನ್ ಅನ್ನು ಹೈಕೋರ್ಟ್ ಕಟುವಾಗಿ ಟೀಕಿಸಿದೆ. ಧ್ವಜಸ್ತಂಭ, ಪತಾಕೆಗಳನ್ನು ತೆಗೆಯಲು ಕ್ರಮ ಕೈಗೊಳ್ಳದ ಪಾಲಿಕೆಯನ್ನು ಹೈಕೋರ್ಟ್ ಟೀಕಿಸಿದೆ. ಕಾನೂನು ಬಾಹಿರವಾಗಿ ಧ್ವಜ, ಪತಾಕೆಗಳನ್ನು ನೆಟ್ಟವರು ಯಾರು ಎಂಬುದನ್ನು ಪತ್ತೆಮಾಡುವುದು ನ್ಯಾಯಾಲಯವಲ್ಲ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದ್ದಾರೆ.

           ಈ ವಿಷಯದಲ್ಲಿ ನ್ಯಾಯಾಲಯಕ್ಕೆ ವಿಶೇಷ ಆಸಕ್ತಿ ಇಲ್ಲ. ಪಾಲಿಕೆಯ ಅನುಮತಿಗೆ ವಿರುದ್ಧವಾಗಿ ಫುಟ್‍ಪಾತ್‍ನಲ್ಲಿ ಧ್ವಜಸ್ತಂಭಗಳನ್ನು ಹೇಗೆ ನಿರ್ಮಿಸಲಾಗಿದೆ ಎಂದು ಅವರು ಕೇಳಿದರು. ಪಾಲಿಕೆ ಕ್ರಮ ಕೈಗೊಳ್ಳಲು ಹೆದರಿದರೆ, ಪಾಲಿಕೆ ಕಾರ್ಯದರ್ಶಿ ಮುಕ್ತವಾಗಿ ಮಾತನಾಡುವ ಹೆದರದ ಅಧಿಕಾರಿಗಳು ಇರಲಿ ಎಂದು ಆಶಿಸಿದರು.

                   ಅಕ್ರಮವಾಗಿ ನಿರ್ಮಿಸಿರುವ ಧ್ವಜಸ್ತಂಭಗಳ ವಿವರಗಳನ್ನು ಬಹಿರಂಗಪಡಿಸದ ಪಾಲಿಕೆ ಕಾರ್ಯದರ್ಶಿಯನ್ನು ನ್ಯಾಯಮೂರ್ತಿ ತೀವ್ರವಾಗಿ ಟೀಕಿಸಿದರು.

            ಈ ಹಿಂದೆ ಸಿಪಿಎಂ ರಾಜ್ಯ ಸಮಾವೇಶದ ನಿಮಿತ್ತ ಫುಟ್‍ಪಾತ್‍ಗಳಲ್ಲಿ ಧ್ವಜಸ್ತಂಭಗಳನ್ನು ನಿರ್ಮಿಸಿದ್ದಕ್ಕೆ ನ್ಯಾಯಾಲಯ ತೀರ್ಪು ನೀಡಿತ್ತು. ಧ್ವಜಗಳನ್ನು ಕಿತ್ತರೆ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಏನಾಗಬಹುದು ಎಂದು ಹೈಕೋರ್ಟ್ ಟೀಕಿಸಿದೆ. ಸಮ್ಮೇಳನ ಮುಗಿದ ನಂತರ ಧ್ವಜಸ್ತಂಭಗಳನ್ನು ತೆಗೆಯುವಂತೆಯೂ ನ್ಯಾಯಾಲಯ ಸೂಚಿಸಿದೆ.

                 ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಪಿಎಂ ರಾಜ್ಯ ಸಮಾವೇಶದಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಹರಿಹಾಯ್ದಿದ್ದರು. ಕೆಂಪು ಬಾವುಟ ಕಂಡರೆ ಟ|ಈಕಿಸುವುದು  ದುರಹಂಕಾರ, ಅ|ಂತವರನ್ನು ಹೇಗೆ ಪರಿಗಣಿಸಬೇಕೆಂಬುದನ್ನು ಇತಿಹಾಸ ಪರಿಶೀಲಿಸಬೇಕು ಎಂದು ಪಿಣರಾಯಿ ವಿಜಯನ್ ಟೀಕಿಸಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ನ್ಯಾಯಾಲಯ ತನ್ನ ಪ್ರಸ್ತುತ ನಿಲುವಿನಲ್ಲಿ ಹೇಳಿದೆ. 22ರಂದು ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries