HEALTH TIPS

ಜಿಲ್ಲೆಯಲ್ಲಿ ಕಾಂಡ್ಲಾ ವನ ಯೋಜನೆಗೆ ಚಾಲನೆ: ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆ

                                        

                  ಕಾಸರಗೋಡು: ಪರಿಸರ ಪುನಶ್ಚೇತನದ ಅಂಗವಾಗಿ ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಪಳ್ಳಿಕ್ಕೆರೆ  ಗ್ರಾಮ ಪಂಚಾಯತ್, ಉದುಮ ಕಾಲೇಜು ಎನ್‍ಎಸ್‍ಎಸ್ ಘಟಕ ಮತ್ತು ಪುಲರಿ ಕ್ಲಬ್ ಸಹಯೋಗದಲ್ಲಿ ಕಾಂಡ್ಲಾ ಹಸಿರುಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 

             ಯೋಜನೆಯನ್ನು ಉದ್ಘಾಟಿಸಿದ ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್ ಕಾಂಡ್ಲಾ ವನದ ಮಹತ್ವದ ಬಗ್ಗೆ ಮಾತನಾಡಿದರು. ಜೀವವೈವಿಧ್ಯ ಮಂಡಳಿಯ ಮಾಜಿ ಸದಸ್ಯ ಕಾರ್ಯದರ್ಶಿ ಹಾಗೂ ಕಾಞಂಗಾಡ್ ಡಿವೈಎಸ್ಪಿ ಡಾ. ವಿ ಬಾಲಕೃಷ್ಣನ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಕಾಂಡ್ಲಾ ಪಚ್ಚತುರುತ್ತು ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಕೇರಳದ ಪ್ರತಿ ಜಿಲ್ಲೆಗಳಲ್ಲಿ ಇದನ್ನು ಪ್ರಾರಂಭಿಸಲಾಗುವುದು. ಪರಿಸರದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿ, ದಿನನಿತ್ಯದ ಶೋಷಣೆಗೆ ಒಳಗಾಗುತ್ತಿರುವ ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಹಸಿರಿನ ವೈವಿಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೇಕಲ ನದಿಯ ಉದ್ದಕ್ಕೂ ಸುಮಾರು 500 ಕಾಂಡ್ಲಾ ಸಸಿಗಳನ್ನು ನೆಡಲಾಗಿದೆ. ಜಿಲ್ಲೆಯಲ್ಲಿ ಈಗಿರುವ 459 ಹಸಿರು ದ್ವೀಪಗಳ ಮುಂದುವರಿದ ಭಾಗವಾಗಿ ಕಾಂಡ್ಲಾ ವನ  ಸಿದ್ಧಪಡಿಸಲಾಗುತ್ತಿದೆ. ಹಸಿರು ಕೇರಳ ಮಿಷನ್‍ನ ಸಿ ಪಾರ್ ಯು ಯೋಜನೆಯ ಭಾಗವಾಗಿ ಹಸಿರು ಮನೆ  ಮಾದರಿಯನ್ನು ಸಿದ್ಧಪಡಿಸಲಾಗಿದೆ. 

                ಹರಿತ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಎಂ.ಪಿ ಸುಬ್ರಮಣಿಯನ್ ಅವರು ಯೋಜನೆಯನ್ನು ವಿವರಿಸಿದರು. ಉಪಾಧ್ಯಕ್ಷೆ ನಸ್ರೀನ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಮಣಿ ಹಾಗೂ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಸೂರಜ್, ಸದಸ್ಯರಾದ ಮೊವ್ವಲ್ ಕುಂಞÂ್ಞ ಅಬ್ದುಲ್ಲಾ, ಹಸಿರು ಕೇರಳ ಮಿಷನ್ ಸಂಪನ್ಮೂಲ ವ್ಯಕ್ತಿ ಎ.ಪಿ.ಅಭಿರಾಜ್, ಜೀವನಂ ಯೋಜನಾ ನಿರ್ದೇಶಕ ಜೀವನಂ ದಿವಾಕರನ್, ಎ.ಕೆ.ಜಯಪ್ರಕಾಶ್, ಪ್ರಣವ್ ಕುಮಾರ್ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries