ಪೆರ್ಲ : ಆರ್ ಎಸ್ ಬಿ ಯುವ ಸಂಘ ಮೊಗೇರು ಇದರ ಸಹಯೋಗದಲ್ಲಿ ಸ್ವ ಸಮಾಜ ಬಾಂಧವರ ಐದನೇ ವರ್ಷದ ನಿಗದಿತ ಓವರುಗಳ ಒಂಬತ್ತು ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಕಾಟುಕುಕ್ಕೆ ಬಿ.ಎ. ಯುಪಿ ಶಾಲಾ ಮೈದಾನದಲ್ಲಿ ಜರಗಿತು.
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪಂದ್ಯಾಟ ಉದ್ಘಾಟಿಸಿದರು. ಆರ್ ಎಸ್ ಬಿ ಯುವ ಸಂಘ ಮೊಗೇರು ಇದರ ಅಧ್ಯಕ್ಷರಾದ ನಿತೇಶ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಮಚಂದ್ರನಾಯಕ್ ಆಲ್ಚಾರು, ಸ್ವರ್ಗ ಶಾಲಾ ಅಧ್ಯಾಪಕ ಸಚ್ಚಿದಾನಂದ ಭಟ್ ಮುಖ್ಯ ಅತಿಥಿಗಳಾಗಿದ್ದರು. ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ತೋಟದಮನೆ ಬಹುಮಾನ ವಿತರಿಸಿದರು.ಕಾಟುಕುಕ್ಕೆ ಬಿಎಯುಪಿ ಶಾಲಾ ಸಂಚಾಲಕ ಕೃಷ್ಣಭಟ್ ಕುಂಚಿನಡ್ಕ, ದೇವಾನಂದ ಶರ್ಮ ಪಂಜಿಕಲ್ಲು, ಕರಿಂಬಿಲ ಲಕ್ಷ್ಮಣ ಪ್ರಭು ಮೊದಲಾದವರು ಪಾಲ್ಗೊಂಡರು. ಪಂದ್ಯಾಟದಲ್ಲಿ ಆರ್ ಯಸ್ ಬಿ ಯುವ ಸಂಘ ಮೊಗೇರು ಪ್ರಥಮ,ಪ್ರಣಮ್ಯ ಬೆಳ್ಳಾರೆ ದ್ವಿತೀಯ ಬಹುಮಾನ, ಪ್ರಣಮ್ಯ ಬೆಳ್ಳಾರೆ ತಂಡದ ಪ್ರಮೋದ್ ಪಂದ್ಯ ಶ್ರೇಷ್ಠ,ಆರ್ ಎಸ್ ಬಿ ಮೊಗೇರು ತಂಡದ ನಿತಿನ್ ಸರಣಿ ಶ್ರೇಷ್ಠ ಬಹುಮಾನ ಗಳಿಸಿಕೊಂಡರು. ಪ್ರಣೀತ ಮೊಗೇರು ಪ್ರಾರ್ಥನೆ ಹಾಡಿದರು. ರವೀಂದ್ರ ನಾಯಕ್ ಪೆರ್ಲ ಸ್ವಾಗತಿಸಿ ಪ್ರಶಾಂತ್ ನಾಯಕ್ ಖಂಡಿಗೆ ವಂದಿಸಿದರು.

.jpg)
.jpg)
