ಲಖನೌ: ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಕೈದಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು ಮುಂದೆ ರಾಜ್ಯದ ಜೈಲುಗಳಲ್ಲಿ ಮಹಾಮೃತ್ಯುಂಜಯ ಮಂತ್ರ, ಗಾಯತ್ರಿ ಮಂತ್ರದ ರಾಗಗಳೂ ಮೊಳಗಲಿದೆ. ಸಿಎಂ ಆದೇಶದ ಅನ್ವಯ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರು ಜೈಲು ಆಡಳಿತಕ್ಕೆ ಜೈಲುಗಳಲ್ಲಿ ಮಹಾಮೃತ್ಯುಂಜಯ ಮಂತ್ರ, ಗಾಯತ್ರಿ ಮಂತ್ರ ಪ್ಲೇ ಮಾಡಲು ಸೂಚನೆ ನೀಡಿದ್ದಾರೆ.
ಮಾಹಿತಿ ಪ್ರಕಾರ, ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಸೂಚನೆ ಮೇರೆಗೆ ರಾಜ್ಯದ ಹಲವು ಜಿಲ್ಲೆಗಳ ಜೈಲುಗಳಲ್ಲಿ ಮಂತ್ರಗಳನ್ನು ಹಾಕಲಾಗುತ್ತಿದೆ.
ವಾಸ್ತವವಾಗಿ, ಈ ಮಂತ್ರಗಳನ್ನು ಜೈಲಿನಲ್ಲಿರುವ ಕೈದಿಗಳ ಮಾನಸಿಕ ಶಾಂತಿಗಾಗಿ ಹಾಡಲಾಗುತ್ತದೆ. ಜೊತೆಗೆ ಮಂತ್ರಗಳಿಂದ ಕೈದಿಗಳಿಗೆ ನೆಮ್ಮದಿ ಸಿಗುತ್ತದೆ. ಕೈದಿಗಳು ಗಾಯತ್ರಿ, ಮಹಾಮೃತ್ಯುಂಜಯ ಮಂತ್ರಗಳನ್ನು ಕೇಳಿದರೆ ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ ಎಂಬುದು ರಾಜ್ಯ ಸರ್ಕಾರದ ನಂಬಿಕೆ.