HEALTH TIPS

ತಿರುವನಂತಪುರಂಗೆ ಮೂರನೇ ಬಾರಿ ರಾಷ್ಟ್ರ ಪ್ರಶಸ್ತಿ, ಅತ್ಯುತ್ತಮ ಜಿಲ್ಲಾ ಪಂಚಾಯಿತಿ ಗೌರವ

                ತಿರುವನಂತಪುರಂ: ತಿರುವನಂತಪುರಂ ಜಿಲ್ಲಾ ಪಂಚಾಯಿತಿ ಮೂರನೇ ಬಾರಿಗೆ ಅತ್ಯುತ್ತಮ ಸಾಧನೆಗಾಗಿ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. 

               ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸುರೇಶ್‌ ಕುಮಾರ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ನಮ್ಮ ಸಾಂಘಿಕ ಕಾರ್ಯಕ್ಕೆ ರಾಷ್ಟ್ರೀಯ ಮನ್ನಣೆ ದೊರೆತಿದೆ. ಅವುಗಳಲ್ಲಿ ಕೆಲವು ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಗಾಗಿ ಆಸ್ವಾಸ್ ಯೋಜನೆ ಮತ್ತು ಬಡವರಿಗೆ ಉಚಿತ ಆಹಾರ ನೀಡುವ ಪಾಧೇಯಂ ಯೋಜನೆ ಮತ್ತು ದೈಹಿಕ ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ನೇಹಸ್ಪರ್ಶಂ ವಿದ್ಯಾರ್ಥಿವೇತನದಂತಹ ಉತ್ತಮ ಯೋಜನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

             2020-21ನೇ ಹಣಕಾಸು ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯು ಯೋಜನಾ ವೆಚ್ಚವನ್ನು ಸಾಮಾನ್ಯ ವರ್ಗದಲ್ಲಿ ಶೇ. 99, ವಿಶೇಷ ಉಪ ಯೋಜನೆ ವರ್ಗದಲ್ಲಿ ಶೇ. 98 ರಷ್ಟು ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ವರ್ಗದಲ್ಲಿ ಶೇ.92 ರಷ್ಟು ಬಳಸಿಕೊಳ್ಳಲಾಗಿದೆ.

             ಕೋವಿಡ್ ನಿಯಂತ್ರಣ ಚಟುವಟಿಕೆಗಳು ಅತ್ಯಂತ ಸಂಘಟಿತವಾಗಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಗಳನ್ನು ಸ್ಥಾಪಿಸಿ ಸಕಾಲದಲ್ಲಿ ಅಗತ್ಯ ಔಷಧಿ, ಸಲಕರಣೆಗಳನ್ನು ಒದಗಿಸಿ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries