HEALTH TIPS

ಕಿರುಕುಳಕ್ಕೊಳಗಾದ ಸಂತ್ರಸ್ಥೆಯಿಂದ ಮುಖ್ಯಮಂತ್ರಿಯ ಭೇಟಿ: ಟೀಕೆ ಮಾಡುವವರ ಬಗ್ಗೆ ಹೇಳಲು ಏನೂ ಇಲ್ಲ ಎಂದ ಸಂತ್ರಸ್ಥೆ

                 ತಿರುವನಂತಪುರ: ನಟಿ ಮೇಲಿನ ಹಲ್ಲೆ ಪ್ರಕರಣದ ವಿಧ್ವಂಸಕ ವಿವಾದದ ನಡುವೆಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂತ್ರಸ್ಥೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಬೆಳಗ್ಗೆ ಹತ್ತು ಗಂಟೆಗೆ ಸೆಕ್ರೆಟರಿಯೇಟ್‍ನಲ್ಲಿ ಸಭೆ ನಡೆಯಿತು. ಅರ್ಧ ಗಂಟೆ ಸುದೀರ್ಘ ಸಭೆಯ ಬಳಿಕ ಮುಖ್ಯಮಂತ್ರಿಗಳು ತಕ್ಷಣವೇ ಡಿಜಿಪಿ ಮತ್ತು ಎಡಿಜಿಪಿ ಅವರನ್ನು ಕರೆಸಿದರು ಎಂದು ತಿಳಿದುಬಂದಿದೆ.

                   ಸಭೆಯ ನಂತರ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲು ಸಂತ್ರಸ್ಥೆ ಉತ್ಸಾಹ ತೋರಿಸಿದರು. ಪ್ರಕರಣವನ್ನು ಹಾಳುಮಾಡಲು ಯತ್ನ ನಡೆಯುತ್ತಿದೆ ಎಂದು ಸಂತ್ರಸ್ಥೆಯ ದೂರಿನ ನಂತರ ಅನೇಕ ಸಿಪಿಎಂ ನಾಯಕರ ಟೀಕೆಗಳಿಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು. ಕಳೆದ ಐದು ವರ್ಷಗಳಿಂದ ಅವರು ಅನುಭವಿಸಿದ ಹೋರಾಟ ಮತ್ತು ಆ ಸಂಕಷ್ಟಗಳು ಇತರರಿಗೆ ಅರ್ಥವಾಗದಿರಬಹುದು. ಅಂತಹವರಿಗೆ ಹೇಳಲು ಏನೂ ಇಲ್ಲ, ಯಾರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಸಂತ್ರಸ್ಥೆ ಪ್ರತಿಕ್ರಿಯಿಸಿದ್ದಾರೆ.

                ಪ್ರಕರಣ ಧೀರ್ಘಕಾಲ ಮುಂದುವರಿಯುವ ಬಗ್ಗೆ ಭೀತಿಯಿದೆ. ಮುಖ್ಯಮಂತ್ರಿಗಳ ಮಾತಿಗೆ ತೃಪ್ತಿಯಾಯಿತು. ಸರ್ಕಾರ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ನಟಿ ಹೇಳಿದರು. ಮುಖ್ಯಮಂತ್ರಿಯವರ ಮಾತುಗಳನ್ನು ಸಂಪೂರ್ಣವಾಗಿ ನಂಬಿದ್ದೇನೆ ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries