HEALTH TIPS

ನಾಯಿ ನಡಿಗೆಯ ಕಥೆ: ಐಎಎಸ್ ಅಧಿಕಾರಿಯ ಸಾಕುಪ್ರಾಣಿ ವಾಕಿಂಗ್‌ಗೆ ಸ್ಟೇಡಿಯಂ ಬಂದ್!

          ನವದೆಹಲಿ: ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಬೇಕಿದ್ದ ಕ್ರೀಡಾಂಗಣವನ್ನು ಸಾಕು ನಾಯಿಯ ವಾಯುವಿಹಾರ ಮಾಡಿಸುವುದಕ್ಕಾಗಿ ಐಎಎಸ್ ದಂಪತಿ ಅವಧಿಗೂ ಮುನ್ನವೇ ಮುಚ್ಚಿಸಿರುವ ವಿಚಿತ್ರ ವಿದ್ಯಮಾನ ದೆಹಲಿಯಲ್ಲಿ ನಡೆದಿದೆ.

              ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಹಾಗೂ ಅವರ ಪತ್ನಿ, ಐಎಎಸ್ ಅಧಿಕಾರಿ ರಿಂಕು ದುಗ್ಗಾ ವಿರುದ್ಧ ಕ್ರೀಡಾಂಗಣ ಮುಚ್ಚಿಸಿದ ಆರೋಪ ಕೇಳಿಬಂದಿದ್ದು, ಅವರಿಬ್ಬರನ್ನು ಬೇರೆ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

                                     ನಡೆದಿದ್ದೇನು?

             ಮಾಧ್ಯಮ ವರದಿಗಳ ಪ್ರಕಾರ, ನಾಯಿಯನ್ನು ವಾಯುವಿಹಾರ ಮಾಡಿಸುವುದಕ್ಕೆಂದು ಐಎಎಸ್ ದಂಪತಿ ದೆಹಲಿಯ ತ್ಯಾಗರಾಜ್‌ ಕ್ರೀಡಾಂಗಣವನ್ನು ಅವಧಿಗೂ ಮೊದಲೇ ಮುಚ್ಚಿಸಿದ್ದರು. ಸಂಜೆ 6 ಅಥವಾ 7 ಗಂಟೆ ಒಳಗೆಯೇ ಕ್ರೀಡಾಂಗಣವನ್ನು ಮುಚ್ಚಿಸಿ ಅಥ್ಲೀಟ್‌ಗಳು, ತರಬೇತುದಾರರನ್ನು ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸಲಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

              ಈ ಕುರಿತು ಗೃಹ ಸಚಿವಾಲಯವು ದೆಹಲಿ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿಯವರು ಅಧಿಕಾರ ದುರ್ಬಳಕೆ ಬಗ್ಗೆ ವರದಿ ಸಲ್ಲಿಸಿದ್ದರು.

ಪತಿ ಲಡಾಖ್‌ಗೆ, ಪತ್ನಿ ಅರುಣಾಚಲಕ್ಕೆ ವರ್ಗಾವಣೆ

               ಸಂಜೀವ್ ಖಿರ್ವಾರ್ ಹಾಗೂ ಅವರ ಪತ್ನಿ ರಿಂಕು ದುಗ್ಗಾ 1994ನೇ ತಂಡದ ಐಎಎಸ್ ಅಧಿಕಾರಿಗಳಾಗಿದ್ದಾರೆ. ಖಿರ್ವಾರ್ ಅವರನ್ನು ಲಡಾಖ್‌ಗೆ ಹಾಗೂ ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.

                           ರಾತ್ರಿ 10ರವರೆಗೆ ತೆರೆದಿರಬೇಕು: ಕೇಜ್ರಿವಾಲ್ ಸೂಚನೆ

           ದೆಹಲಿಯಲ್ಲಿರುವ ಎಲ್ಲ ಕ್ರೀಡಾ ಸೌಲಭ್ಯ ಕೇಂದ್ರಗಳು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಮುಕ್ತವಾಗಿರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.

                'ಕ್ರೀಡಾಂಗಣಗಳು ಸಂಜೆ 6 ಅಥವಾ 7 ಗಂಟೆಗೆ ಮುಚ್ಚುತ್ತಿದ್ದು, ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಕ್ರೀಡಾಪಟುಗಳಿಗೆ ಸೌಲಭ್ಯಗಳು ಲಭ್ಯವಿರಬೇಕು' ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries