HEALTH TIPS

ವಾಚನ-ಪರಿಪೋಷಣ ಶಾಲಾ ಮಟ್ಟದ ಉದ್ಘಾಟನೆ

              ಕಾಸರಗೋಡು: ಸರ್ವಶಿಕ್ಷಾ ಕೇರಳದ ಯೋಜನೆಯ ಭಾಗವಾದ ವಾಚನ-ಪರಿಪೋಷಣ ಕಾರ್ಯಕ್ರಮದ ಶಾಲಾ ಮಟ್ಟದ ಉದ್ಘಾಟನೆ ನಗರದ ಜಿ ಯು ಪಿ ಶಾಲೆ ಕಾಸರಗೋಡು ಸಿರಿಗನ್ನಡ ಗೆಲ್ಗೆ ಪ್ರತಿಷ್ಠಾನ ಬೆಂಗಳೂರು ಜಂಟಿ ಆಶ್ರಯದಲ್ಲಿ ಜರಗಿತು. 

                ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಶ್ರೀ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಡಾ.ಶ್ರೀಶಕುಮಾರ ಪಂಜಿತ್ತಡ್ಕ ಉದ್ಘಾಟಿಸಿದರು. ಎಳೆಯ ವಯಸ್ಸಿನಲ್ಲಿ ಓದುವ, ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡು ಸೃಜನಶೀಲ  ಬೆಳವಣಿಗೆಯಲ್ಲಿ ಸಕ್ರಿಯವಾಗಿಗಿರಬೇಕು ಎಂದು ಕರೆ ನೀಡಿದರು. 

                  ಬಳಿಕ ಸಿರಿಗನ್ನಡ ಪ್ರತಿಷ್ಠಾನ ಆಯೋಜಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರತಿಷ್ಠಾನದ ಸದಸ್ಯ ಶಾಲೆಯ ಹಳೆಯ ವಿದ್ಯಾರ್ಥಿ ಧನೇಶ್ ಕೋಟೆಕಣಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸಿದರು. ಶಾಲಾ ಹಿರಿಯ ಅಧ್ಯಾಪಕಿ ಮೀನಾಕುಮಾರಿ ಹಾಗೂ ಶಾಲೆಯ ರಕ್ಷಕರು ಶಿಕ್ಷಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸುರೇಖಾ ಕೆ ಸ್ವಾಗತಿಸಿ, ನಿರೂಪಿಸಿದರು.  ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಕಲಾ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries