ತ್ರಿಶೂರ್: ಕದಿಯಲು ಹೋದ ಜಾಗದಿಂದ ಏನೂ ಸಿಗದಿದ್ದಾಗ ಹತಾಶೆಗೊಂಡ ಕಳ್ಳನೊಬ್ಬ ಬರೆದಿಟ್ಟಿರುವ ಟಿಪ್ಪಣಿ ವೈರಲ್ ಆಗುತ್ತಿದೆ. ಕುನ್ನಂಕುಳಂನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ಗೆ ನುಗ್ಗಿದ ಕಳ್ಳನಿಗೆ ಸಂಸ್ಥೆಯಿಂದ ಏನೂ ಸಿಗದಿದ್ದಾಗ ನಿರಾಸೆಯಾಯಿತು.
ಮಾಲ್ನಲ್ಲಿರುವ ಮೂರು ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರಿಗೆ ಒಂದು ಅಂಗಡಿಯಿಂದ 12 ಸಾವಿರ ರೂ., ಇನ್ನೊಂದು ಅಂಗಡಿಯಿಂದ 500 ರೂ. ಮಾತ್ರ ಸಿಕ್ಕಿತು. ಆದರೆ ಕಳ್ಳರು ಬಾಗಿಲು ಮುರಿದು ಮೂರನೇ ಅಂಗಡಿಗೆ ಹೋಗಿ ನಿರಾಸೆಯಿಂದ ವಾಪಸಾದ. ಆ ಅಂಗಡಿ ಮಾಲಕ ನಯಾಪ್ಯೆಸೆ ಇರಿಸಿರಲಿಲ್ಲ. ಇದರೊಂದಿಗೆ ಕಳ್ಳ ಇಲ್ಲಿಂದ ಕೇವಲ ಒಂದು ಜೊತೆ ಡ್ರೆಸ್ ತೆಗೆದುಕೊಂಡು ಹೋಗಿದ್ದಾನೆ. ಹತಾಶೆಗೊಂಡು ಟಿಪ್ಪಣಿಯನ್ನೂ ಬರೆದು ತೆರಳಿದ್ದ.
‘ಹಣವಿಲ್ಲದಿದ್ದರೆ ಬಾಗಿಲಿಗೆ ಬೀಗ ಹಾಕಿದ್ದೇಕೆ, ಹೇಗೂ ಬಾಗಿಲು ಒಡೆದು ಹಾಕಿರುವೆ! ಅದಕ್ಕೆ ಒಂದೆರಡು ಡ್ರೆಸ್ ಮಾತ್ರ ತೆಗೆದೊಯ್ದಿರುವೆ' ಎಂದು ಕಳ್ಳರು ಪೇಪರ್ ಮೇಲೆ ಬರೆದು ತೆರಳಿದ್ದಾರೆ.