ಮಂಜೇಶ್ವರ: ವರ್ಕಾಡಿ ಕೃಷಿ ಭವನದಲ್ಲಿ ಜಿಲ್ಲಾ ಮಟ್ಟದ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆಯ ವತಿಯಿಂದ 'ಕೃಷಿ ವಿಸ್ತರಣೆ ಬಲವರ್ಧನೆ' ಯೋಜನೆಯಡಿ ರೈತ ಸಭಾಂಗಣ ಹಾಗೂ ಸಸಿ ಮಾರುಕಟ್ಟೆಗಳ ಉದ್ಘಾಟನೆ ನಡೆಯಿತು.
ಕಾಳುಮೆಣಸು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಆತ್ಮ ಯೋಜನೆಯ ನಿರ್ದೇಶಕಿ ಸುಶೀಲಾ.ಟಿ ಯೋಜನೆಯನ್ನು ವಿವರಿಸಿದರು. ಜಿಲ್ಲಾ ಪಂಚಾಯತಿ ಸದಸ್ಯರಾದ ಕಮಲಾಕ್ಷಿ, ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯತಿಗಳ ಸದಸ್ಯರಾದ ಮೊಯ್ತೀನ್ ಕುಂಞÂ್ಞ, ಎಂ.ಎಲ್.ಅಶ್ವಿನಿ, ವರ್ಕಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಕುಮಾರ್, ಸದಸ್ಯರಾದ ಕಮರುನ್ನೀಸ, ಲತೀಫ್, ಪದ್ಮಾವತಿ, ಸಿ.ಎ.ಅಬ್ದುಲ್ ಮಜೀದ್, ಸೀತಾ, ಉಮ್ಮರ್, ಇಬ್ರಾಹಿಂ, ಗೀತಾ ಭಾಸ್ಕರ್, ಕೃಷಿ ಉಪನಿರ್ದೇಶಕಿ(ಇ&ಟಿ) ) ಮಿನಿ ಪಿ.ಜಾನ್, ಆತ್ಮ ಉಪ ಯೋಜನಾ ನಿರ್ದೇಶಕಿ ಕೆ.ಪಿ.ಸಲಿನಮ್ಮ, ಮಂಜೇಶ್ವರ ಸಹಾಯಕ ಕೃಷಿ ನಿರ್ದೇಶಕಿ ಪಿ.ವಿ.ಅರ್ಜಿತ, ಇಟಿಸಿ ಮುಖ್ಯಸ್ಥ ಡಾ.ಶಶಿಕಾಂತ್ ಉಪಸ್ಥಿತರಿದ್ದರು. ವರ್ಕಾಡಿ ಕೃಷಿ ಅಧಿಕಾರಿ ಡಾ.ವಂದನಾ ಜಿ.ಪಿ ಸ್ವಾಗತಿಸಿ, ವಂದಿಸಿದರು.