ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯ ಏತಡ್ಕ ಇದರ ಆಶ್ರಯದಲ್ಲಿ ಏತಡ್ಕ ಸಮೀಪದ ಕಟ್ಟದಮೂಲೆ ಭಾಗ್ಯಲಕ್ಷ್ಮೀ ನಿವಾಸದಲ್ಲಿ ವಾಚನಾ ಪಕ್ಷದ ಉದ್ಘಾಟನೆ ನಡೆಯಿತು. ಗ್ರಂಥಾಲಯದ ಅಧ್ಯಕ್ಷ ವೈ ವಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾಸರಗೋಡು ಇದರ ಅಧ್ಯಕ್ಷ ಇ. ಜನಾರ್ದನನ್, ವೈ. ಕೆ. ಗೋವಿಂದ ಭಟ್ ಪಾಲ್ಗೊಂಡಿದ್ದರು. ಕಾರ್ತಿಕ್ ಕುಮಾರ್ ಕಡೆಕಲ್ಲು ಪ್ರಾರ್ಥಿಸಿದರು. ವೈ ಕೆ ಗಣಪತಿ ಭಟ್ ಸ್ವಾಗತಿಸಿ, ಡಾ. ವೇಣುಗೋಪಾಲ್ ವಂದಿಸಿದರು. ಕಾರ್ಯಕಾರೀ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

.jpg)
