ತಿರುವನಂತಪುರ: ಮಾನ್ಸನ್ ಮಾವುಂಗಲ್ ವಂಚನೆ ಪ್ರಕರಣದ ಮಧ್ಯವರ್ತಿ ಅನಿತಾ ಪುಲ್ಲಾಯಿಲ್ ಇಂದು ಲೋಕ ಕೇರಳ ಸಭೆ ನಡೆದ ವೇಳೆ ವಿಧಾನಸೌಧಕ್ಕೆ ಆಗಮಿಸಿದ್ದಕ್ಕೆ ಸಂಬಂಧಿಸಿ ಇಂದು ಕ್ರಮಕ್ಕೆ ಸಾಧ್ಯತೆಯಿದೆ. ಸ್ಪೀಕರ್ ಎಂ.ಬಿ.ರಾಜೇಶ್ ಸುದ್ದಿಗೋಷ್ಠಿ ನಡೆಸಿ ಕ್ರಮ ಪ್ರಕಟಿಸಲಿದ್ದಾರೆ.
ಚೀಫ್ ಮಾರ್ಷಲ್ ವರದಿ ಪ್ರಕಾರ ಅನಿತಾ ಅವರು ಸಭೆಗೆ ಟಿವಿಗೆ ಒಟಿಡಿ ನೆರವು ನೀಡುವ ಬಿಟ್ರೈಟ್ ಸೊಲ್ಯೂಷನ್ ಸಿಬ್ಬಂದಿಯ ಸಹಾಯದಿಂದ ಅಸಗಮಿಸಿದ್ದರು ಎನ್ನಲಾಗಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಟಿವಿ ಓಪನ್ ಫೋರಂಗೆ ಹಾಜರಾಗಲು ಆಹ್ವಾನವನ್ನು ಅನಿತಾ ಹೊಂದಿದ್ದರಿಂದ ಆಕೆಯನ್ನು ಒಳಗೆ ತೆರಳಲು ಬಿಡಲಾಯಿತು. ಮುಖ್ಯ ಮಾರ್ಷಲ್ ವರದಿ ಪ್ರಕಾರ ಲೋಕ ಕೇರಳ ಸಭೆಯ ಎರಡೂ ಸಭೆಯಲ್ಲಿ ಹಾಜರಿದ್ದ ಶಂಕರನಾರಾಯಣನ್ ತಂಬಿ ಅವರು ವಿಧಾನಸಭೆಯಲ್ಲಿದ್ದರೂ ಸಭಾಂಗಣಕ್ಕೆ ಬಂದಿರಲಿಲ್ಲ.