ಪತ್ತನಂತಿಟ್ಟ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರು ಮಲೆಯಾಳ ಚಲನಚಿತ್ರ ಕಿಲುಕ್ಕಂ ಚಿತ್ರದಲ್ಲಿ ರೇವತಿ ಅವರಂತೆಯೇ ಇದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಸ್ವರಾಜ್ ಹೇಳಿರುವರು. ಸ್ವಪ್ನಾ ಒಂದೊಂದು ಘಳಿಗೆಯಲ್ಲಿ ಒಂದೊಂದು ವಿಷಯವನ್ನು ಹೇಳುತ್ತಾಳೆ. ಇದನ್ನೆಲ್ಲ ಸಮರ್ಥಿಸಿಕೊಳ್ಳಲು ಹೊರಟಿರುವ ಮೋಹನ್ ಲಾಲ್ ಪಾತ್ರದ ಸ್ಥಾನದಲ್ಲಿ ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಇದ್ದಾರೆ ಎಂದು ಆರೋಪಿಸಿದರು. ಪತ್ತನಂತಿಟ್ಟದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸ್ವರಾಜ್ ಮಾತನಾಡಿದರು.
ಕಳ್ಳಸಾಗಾಣಿಕೆದಾರಿ ಸ್ವಪ್ನಾಳ ಮಾತುಗಳನ್ನು ಕೇರಳದ ಕಾಂಗ್ರೆಸ್ ಕೇಳುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಇನ್ನು ಮುಂದೆ ಯುವ ಕಾಂಗ್ರೆಸ್ಸಿಗರು ಮೋಸಗಾರರಿಂದ ಹೊಡೆತ ತಿಂದ ದುರಾದೃಷ್ಟವಂತರು ಎಂಬಂತಾಗುವರು ಎಂದು ವ್ಯಂಗ್ಯವಾಡಿದರು.
ಇಂದು ಕಾಂಗ್ರೆಸ್ ಪಕ್ಷವನ್ನು ಭೂತಗನ್ನಡಿಯಿಂದ ನೋಡಲೂ ಕಷ್ಟವಿದೆ. ಯುಡಿಎಫ್ ಗೆ ಯಾವುದೇ ವಾಸ್ತವಿಕ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ವರಾಜ್ ಹೇಳಿದರು.