HEALTH TIPS

ಹಿರಿಯರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನ ಆಚರಣೆ


            ಕಾಸರಗೋಡು:  ಹಿರಿಯರ ದೌರ್ಜನ್ಯ ತಡೆ ದಿನಾಚರಣೆ ನಿಮಿತ್ತ ಜಿಲ್ಲೆಯಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆಯು ಸಾಮಾಜಿಕ ಭದ್ರತಾ ಮಿಷನ್, ವಯೋಮಿತ್ರ, ಜನಮೈತ್ರಿ ಪೋಲೀಸ್, ಕಾಸರಗೋಡು-ಕಾಞಂಗಾಡ್ ನಿರ್ವಹಣಾ ಟ್ರಿಬ್ಯೂನ್ಸ್ ಮತ್ತು ಹಿರಿಯರ ಪರಿಷತ್ತಿನ ಸಹಯೋಗದಲ್ಲಿ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

                      ನೀಲೇಶ್ವರದಲ್ಲಿ ಆರಂಭಿಸಿ ಚೆರ್ವತ್ತೂರು, ನೆಹರು ಕಾಲೇಜು, ಕಾಞಂಗಾಡ್, ಕಾಸರಗೋಡು ಮತ್ತು ಉಪ್ಪಳದಲ್ಲಿ ಫ್ಲ್ಯಾಶ್ ಮಾಬ್ ಆಯೋಜಿಸಲಾಗಿತ್ತು. ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜಾಗ್ರತೆಯಿಂದ ಕಾಪಿಡೋಣ, ಕಾಳಜಿಯಿಂದ ಮುನ್ನಡೆಯೋಣ ಎಂಬ ಸಂದೇಶದೊಂದಿಗೆ ಫ್ಲ್ಯಾಷ್‍ಮಾಬ್‍ನಲ್ಲಿ ಭಾಗಿಯಾದರು. ಜಾಗೃತಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಿಕೆಎನ್‍ಜಿಎಚ್‍ಎಸ್‍ಎಸ್ ಪಿಲಿಕೋಡ್, ಎಸ್‍ಆರ್‍ಎಂಜಿಎಚ್‍ಎಸ್‍ಎಸ್ ರಾಮನಗರ, ಮಾವುಂಗಾಲ್ ಮತ್ತು ಎನ್‍ಸಿ ಜಿಎಚ್‍ಎಸ್‍ಎಸ್ ಪರಪ್ಪದಲ್ಲಿ ಎಸ್‍ಪಿಸಿ ಘಟಕಗಳು. ಮತ್ತು ಎಸ್‍ಪಿಸಿ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries