ನವದೆಹಲಿ: 'ಅಡುಗೆ ಅನಿಲ ದರವನ್ನು ಏರಿಸುತ್ತಲೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ತಾಕತ್ತಿದ್ದರೆ, ನಮ್ಮನ್ನು ತಡೆಯಿರಿ ಎಂದು ದೇಶದ 133 ಕೋಟಿ ಭಾರತೀಯರಿಗೆ ಈಗ ಸವಾಲು ಹಾಕುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನವದೆಹಲಿ: 'ಅಡುಗೆ ಅನಿಲ ದರವನ್ನು ಏರಿಸುತ್ತಲೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ತಾಕತ್ತಿದ್ದರೆ, ನಮ್ಮನ್ನು ತಡೆಯಿರಿ ಎಂದು ದೇಶದ 133 ಕೋಟಿ ಭಾರತೀಯರಿಗೆ ಈಗ ಸವಾಲು ಹಾಕುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅವರು, 'ಎಲ್ಪಿಜಿ ಸಿಲಿಂಡರ್, ಇಂಧನ ದರ ಏರಿಕೆ, ಗಬ್ಬರ್ ಟ್ಯಾಕ್ಸ್ ಲೂಟ್ ಮತ್ತು ನಿರುದ್ಯೋಗದ ಸುನಾಮಿಯಿಂದ ದಣಿದಿದ್ದೇವೆ, ಇದನ್ನು ನಿಲ್ಲಿಸಿ ಎಂದು ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಬಿಜೆಪಿ ಆಡಳಿತದಲ್ಲಿ ಎಲ್ಪಿಜಿ ಸಿಲಿಂಡರ್ ದರ ಶೇ 157ರಷ್ಟು ಏರಿಕೆಯಾಗಿದೆ. ಇಂಧನ ದರ ಏರಿಕೆ ಎಲ್ಲಾ ದಾಖಲೆಗಳನ್ನು ಮುರಿದಿದೆ' ಎಂದು ಅವರು ಆರೋಪಿಸಿದ್ದಾರೆ.
ಆಂಧ್ರ ಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋದಿ ಅವರು,'ಧೈರ್ಯವಿದ್ದರೆ ನನ್ನನ್ನು ತಡೆಯಿರಿ' ಎಂದು ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರಿಗೆ ಸವಾಲು ಹಾಕಿರುವುದನ್ನು ಉಲ್ಲೇಖಿಸಿ, ಇಂದು ದೇಶದ ಜನರು ಹಲವಾರು ಸವಾಲು ಮತ್ತು ಕಷ್ಟಗಳನ್ನು ಎದುರಿಸುವಾಗ ಈ ಘೋಷವಾಕ್ಯವನ್ನು ಬಳಸುತ್ತಿದ್ದಾರೆ' ಎಂದಿದ್ದರು.