HEALTH TIPS

ಸ್ವಪ್ನಾಳನ್ನು ವಿರೋಧ ಪಕ್ಷ ಖರೀದಿಸಿದೆ: ಅವರಿಗೆ ಈ ವಸ್ತು ಎಲ್ಲಿಂದ ಲಭಿಸಿತು: ಲೇವಡಿಗೈದ ಸಚಿವ ಸಾಜಿ ಚೆರಿಯನ್

               ಆಲಪ್ಪುಳ: ಮಹಿಳೆಯರ ಮೂಲಕ ಕಾಂಗ್ರೆಸ್ ಅಂತ್ಯವಾಗಲಿದೆ ಎಂದು ಸಂಸ್ಕøತಿ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ. ಅದಕ್ಕಾಗಿಯೇ ಸರಿತಾ ಮತ್ತು ಸ್ವಪ್ನಾ ಅವರನ್ನು ಕರೆತಂದು ಸ್ವಪ್ನಾಳನ್ನು ಪ್ರತಿಪಕ್ಷಗಳು ಖರೀದಿಸಿವೆ ಎಂದು ಸಚಿವರು ಆರೋಪಿಸಿದ್ದಾರೆ. ಅಲಪ್ಪುಳದಲ್ಲಿ ನಡೆದ ಎಲ್‍ಡಿಎಫ್ ರ್ಯಾಲಿಯಲ್ಲಿ ಸಚಿವರ ಈ ಮಾತುಗಳು ಕೇಳಿಬಂದಿವೆ.

                ಯುಡಿಎಫ್ ಆಡಳಿತದಲ್ಲಿ ಸರಿತಾ ಹೇಳಿದ್ದ ಕಥೆಯನ್ನೇ ಈಗ ಸ್ವಪ್ನಾ ಸುರೇಶ್ ಹೇಳುತ್ತಿದ್ದಾರೆ ಮತ್ತು ಈ ವಿಷಯ ಅವರಿಗೆ ಎಲ್ಲಿಂದ ಬಂತು ಎಂದು ಸಚಿವ ಸಾಜಿ ಚೆರಿಯನ್ ಲೇವಡಿ ಮಾಡಿದರು. ಈ ಮಹಿಳೆ ಮಾತನಾಡಿದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಸಿಯುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದರು.

                ಮುಖ್ಯಮಂತ್ರಿಗಳ ಪುತ್ರಿಯ  ವಿರುದ್ಧ ಶಾಸಕ ಮ್ಯಾಥ್ಯೂ ಕುಜಲನಾಡನ್ ಆರೋಪ ಮಾಡಿದ್ದಾರೆ ಎಂದು ಸಚಿವರು ಟೀಕಿಸಿದರು. ವೀಣಾ ಬಗ್ಗೆ ಮ್ಯಾಥ್ಯೂ ಕುಜಲನಾಡನ್ ಹೇಳಿರುವುದು ಅಸಭ್ಯವಾಗಿದ್ದು, ಮ್ಯಾಥ್ಯೂ ಕುಜಲನಾಡನ್ ಕುಳಲ್ ಮಂಡನ್ ಎಂದು ಸಂಸ್ಕೃತಿ ಸಚಿವರು ವ್ಯಂಗ್ಯವಾಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries