HEALTH TIPS

ಕೊಂಡೆವೂರು ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆಗೆ ಚಾಲನೆ

                 ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ 18ನೇಚಾತುರ್ಮಾಸ್ಯವನ್ನು ಬುಧವಾರ ಕೊಂಡೆವೂರು ಮಠದಲ್ಲಿ ಆರಂಭಿಸಿದರು. ವ್ಯಾಸಪೂರ್ಣಿಮೆಯ ಪವಿತ್ರದಿನದಂದು ಬೆಳಿಗ್ಗೆ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಸೀಯಾಳಾಭಿಷೇಕ, ವ್ಯಾಸಹವನ ಕಾರ್ಯಕ್ರಮ ನೆರವೇರಿತು. ನಂತರ ಭಜನಾಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಗುರು ಪಾದುಕಾ ಪೂಜೆಮತ್ತು ಶ್ರೀಗಳವರಿಂದ ಸತ್ಸಂಗ ನಡೆಯಿತು. ಸೆ. 10ರ ವರೆಗೆ ನಡೆಯುವ ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತೀ ವಾರ ವಿವಿಧ ವಿದ್ವಾಂಸರುಗಳಿಂದ ಪ್ರವಚನ, ವಿವಿಧ ಭಜನಾತಂಡಗಳಿಂದ ಭಜನಾ ಸೇವೆ ನಡೆಯಲಿರುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries