ನವದೆಹಲಿ: ಗಡಿಯಲ್ಲಿ ಉಗ್ರರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಬಗ್ಗೆ ಪ್ರಧಾನಿ ಮೋದಿ ಬದ್ಧತೆಯಿಂದಾಗಿ ಪಾಕಿಸ್ತಾನ ಕುರಿತ ಭಾರತದ ನೀತಿ 2014ರ ನಂತರ ಸ್ಪಷ್ಟರೂಪ ಪಡೆಯುವಂತಾಯಿತು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
0
samarasasudhi
ಜುಲೈ 05, 2022
ನವದೆಹಲಿ: ಗಡಿಯಲ್ಲಿ ಉಗ್ರರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಬಗ್ಗೆ ಪ್ರಧಾನಿ ಮೋದಿ ಬದ್ಧತೆಯಿಂದಾಗಿ ಪಾಕಿಸ್ತಾನ ಕುರಿತ ಭಾರತದ ನೀತಿ 2014ರ ನಂತರ ಸ್ಪಷ್ಟರೂಪ ಪಡೆಯುವಂತಾಯಿತು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವೆರಿ' ಹೆಸರಿನ ತಾವು ರಚಿಸಿದ ಪುಸ್ತಕವನ್ನು ಕುರಿತು ವಿಶ್ವವಿದ್ಯಾಲಯವು ಆಯೋಜಿಸಿದ್ದ ವಿಶೇಷ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೈಶಂಕರ್ ಮಾತನಾಡಿದರು.
'ಪ್ರಧಾನಿಯನ್ನು ವಿದೇಶದಲ್ಲಿ 'ಸರ್ವೋತ್ತಮ ಭಾರತೀಯ' ಎಂದು ಗುರುತಿಸಲಾಗುತ್ತದೆ. ರಾಜತಾಂತ್ರಿಕತೆ ಕುರಿತ ಅವರ ವ್ಯಕ್ತಿತ್ವದಿಂದಾಗಿ ವಿದೇಶಗಳು, ಅಲ್ಲಿನ ನಾಯಕರ ಜೊತೆಗೆ ಸಂವಹನಕ್ಕೆ ನೆರವಾಗಿದೆ' ಎಂದರು.
ಪುಸ್ತಕದ ಆಯ್ದ ಭಾಗ ಓದಿದ ಅವರು, 'ಅವರನ್ನು (ಮೋದಿ) ಚೀನಾದಲ್ಲಿ 2011ರಲ್ಲಿ ಮೊದಲು ನೋಡಿದಾಗ ನಾನು ರಾಯಭಾರಿಯಾಗಿದ್ದೆ. ಇತರೆ ನಾಯಕರಿಗಿಂತ ಭಿನ್ನವಾಗಿ ಅವರು ಬೆಳವಣಿಗೆ ಕುರಿತು ರಾಜಕೀಯ ವಿವರಣೆಯನ್ನು ಬಯಸಿದ್ದರು' ಎಂದು ತಿಳಿಸಿದರು.
ಭಯೋತ್ಪಾದನೆ ಮತ್ತು ಸಾರ್ವಭೌಮತೆ ಕುರಿತು ವಿದೇಶಗಳಲ್ಲಿ ಮುಖ್ಯವಾಗಿ ಚೀನಾದಲ್ಲಿ ಏಕ ದನಿಯಲ್ಲಿ ಮಾತನಾಡಬೇಕು ಎಂದು ಮೋದಿ ಒತ್ತಿ ಹೇಳುತ್ತಿದ್ದರು. ಅವರ ನೀತಿ, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದರಿಂದಾಗಿ ವಿಶ್ವದಲ್ಲಿ ದೊಡ್ಡ ನಾಯಕನಾಗಿ ಬೆಳೆದಿದ್ದಾರೆ ಎಂದರು.
ಪುಸ್ತಕ ಕುರಿತಂತೆ ಅವರು, ಪುಸ್ತಕದ ಅತಿ ಹೆಚ್ಚಿನ ಭಾಗವನ್ನು ಸರ್ಕಾರದಿಂದ ಹೊರಗಿನವರೂ ಬರೆದಿದ್ದಾರೆ ಎಂದು ಹೇಳಿದರು.