ತಿರುವನಂತಪುರ: ಸಾಲದ ಸುಳಿಯಲ್ಲಿ ಮುಳುಗಿರುವ ಮಧ್ಯೆ ಆಡಳಿತ ವೆಚ್ಚ ಭರಿಸಲು ಸರ್ಕಾರ ಮತ್ತೆ ಸಾಲ ಮಾಡಲು ಸಿದ್ಧತೆ ನಡೆಸಿದೆ.
ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿ ಸಾಲ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಮುಖ ವೆಚ್ಚಗಳು ಬೋನಸ್, ಗ್ರಾಚ್ಯುಟಿ ಮತ್ತು ಮುಂಗಡ ಪತ್ರದ ಕೆಲವು ಘೋಷಿತ ಯೋಜನೆ ಅನುಷ್ಠಾನಕ್ಕೆ ಬೇಕಾಗಿಬರಲಿದೆ. ಇದಕ್ಕಾಗಿ ಸರ್ಕಾರದ ಬೊಕ್ಕಸದಿಂದ 8000 ಕೋಟಿ ವ್ಯಯಿಸಬೇಕಾಗುತ್ತದೆ.
ಓಣಂ ದಿನದಂದು ಎರಡು ತಿಂಗಳ ಕಲ್ಯಾಣ ಪಿಂಚಣಿಯನ್ನು ಒಟ್ಟಿಗೆ ನೀಡಲು ನಿರ್ಧರಿಸಲಾಗಿದೆ. ಎರಡು ತಿಂಗಳಿಗೆ 3200 ಪಿಂಚಣಿ ನೀಡಲು ಉದ್ದೇಶಿಸಲಾಗಿದೆ 1800 ಕೋಟಿ ವೆಚ್ಚ ಬೇಕಾಗಿಬರಲಿದೆ ಎಂದು ಅಂದಾಜಿಸಲಾಗಿದೆ. ಒಂದು ತಿಂಗಳ ಸಂಬಳ ಮತ್ತು ಪಿಂಚಣಿಗಾಗಿ 5000 ಕೋಟಿ ಖರ್ಚು ಮಾಡಲಾಗುವುದು. ಇದಲ್ಲದೇ ಹಬ್ಬದ ಭತ್ಯೆ ಹಾಗೂ ಬೋನಸ್ ನೀಡಬೇಕಾಗುತ್ತದೆ. ಎಲ್ಲದಕ್ಕೂ 8000 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚುವರಿ ವೆಚ್ಚಗಳಿಗಾಗಿ ಸಾಲ ಪಡೆಯುವ ಕ್ರಮಗಳಿಗೆ ಮುಂದಾಗಲು ಸಿದ್ದತೆಗಳು ಸಾಗಿವೆ ಎನ್ನಲಾಗಿದೆ.
ಇದಲ್ಲದೇ ಕಿಟ್ ವಿತರಣೆಯನ್ನೂ ಮಾಡಬೇಕಾಗಿದೆ. ಅದಕ್ಕಾಗಿ ನಾಗರಿಕ ಪೂರೈಕೆಯ ಹಣವನ್ನು ಬಳಸಲಾಗುವುದು ಎಂದು ತಿಳಿಸಲಾಗಿದೆ. ಓಣಂ ಮುಗಿಯುತ್ತಿದ್ದಂತೆ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಕೇರಳ ತೀವ್ರ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿರುವುದು ನಿಚ್ಚಳವಾಗಿದೆ.
8000 ಕೋಟಿ ಆರ್ಥಿಕ ತೊಡಕಿನತ್ತ ರಾಜ್ಯ: ನಿರ್ವಹಣಾ ವೆಚ್ಚಕ್ಕಾಗಿ ಸರ್ಕಾರ ಸಾವಿರ ಕೋಟಿ ಸಾಲ ಪಡೆಯುವ ಸಿದ್ದತೆಯಲ್ಲಿ
0
August 19, 2022
Tags