ತಿರುವನಂತಪುರ: ವಿಝಿಂಜಂನಲ್ಲಿ ನಡೆಯುತ್ತಿರುವ ಮೀನುಗಾರರ ಮುಷ್ಕರ ನಿನ್ನೆ ನಾಲ್ಕನೇ ದಿನವೂ ಉದ್ವಿಗ್ನಗೊಂಡಿತ್ತು. ಬಂದರು ಭಾಗದಲ್ಲಿ ಮೀನುಗಾರರು ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ಬದಲಾಯಿತು.
ನಿನ್ನೆ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರ ಚರ್ಚೆ ನಡೆಸುತ್ತಿದ್ದ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಭಾರೀ ಪೋಲೀಸ್ ಬಂದೋಬಸ್ತ್ ಭೇದಿಸಿದ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಉರುಳಿಸಿದರು.
ನೂರಾರು ಜನ ಸೇರಿದ್ದರಿಂದ ಪೋಲೀಸರು ಅಸಹಾಯಕರಾದರು. ಪ್ರತಿಭಟನೆಗೆ ಬರುವವರನ್ನು ನಿಯಂತ್ರಿಸಲು ಅಥವಾ ಬಂಧಿಸಲು ಪೋಲೀಸರಿಗೆ ಸಾಧ್ಯವಾಗಲಿಲ್ಲ. ಬಂದರು ಯೋಜನೆ ವಿರುದ್ಧ ಇμÉ್ಟೂಂದು ತೀವ್ರ ಪ್ರತಿಭಟನೆ ನಡೆಯುತ್ತಿರುವುದು ಇದೇ ಮೊದಲು.
ಮೀನುಗಾರಿಕಾ ಸಚಿವ ವಿ. ಅಬ್ದುರ್ರಹ್ಮಾನ್ ಲ್ಯಾಟಿನ್ ಧರ್ಮಪ್ರಾಂತ್ಯವನ್ನು ಚರ್ಚೆಗೆ ಆಹ್ವಾನಿಸಿದ್ದರು. ಆದರೆ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು ಎಂಬುದು ಸೇರಿದಂತೆ ಬೇಡಿಕೆಗಳನ್ನು ಸ್ವೀಕರಿಸದೆ ಹಿಂದೆ ಸರಿಯುವುದಿಲ್ಲ ಎಂಬ ನಿಲುವು ಧರ್ಮಾಧ್ಯಕ್ಷರು ಹಠಹಿಡಿದರು. ಆಗಸ್ಟ್ 31ರವರೆಗೆ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಪಲ್ಲಂ ಲೂರ್ದಪುರಂ, ಆದಿಮಲತೂರ ಮತ್ತು ಕೊಚ್ಚು ಪಲ್ಲಿಯ ಮೀನುಗಾರರು ನಿನ್ನೆ ಮುತ್ತಿಗೆಯ ನೇತೃತ್ವ ವಹಿಸಿದ್ದರು.
ಬ್ಯಾರಿಕೇಡ್ಗಳನ್ನು ಕಿತ್ತೆಸದು ತಾರಕಕ್ಕೇರಿದ ಮೀನುಗಾರರ ಪ್ರತಿಭಟನೆ: ವಿಝಿಂಜಂ ಬಂದರಲ್ಲಿ ನಾಲ್ಕನೇ ದಿನವೂ ಪ್ರತಿಭಟನೆ ತೀವ್ರ
0
August 20, 2022
Tags