ಸಮರಸ ಚಿತ್ರಸುದ್ದಿ: ಕಾಸರಗೋಡು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳ "ಗುರುಕುಲ ಚಾತುರ್ಮಾಸ್ಯ" ಗೋಕರ್ಣ ಅಶೋಕೆಯಲ್ಲಿ ನಡೆಯುತ್ತಿರುವ ವೇಳೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ, 10ನೇ ತರಗತಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳಿಸಿದ ಕಾಸರಗೋಡು ವಲಯದ ಗಣೇಶ ಪ್ರಸಾದ ಪಾಣೂರು ಹಾಗೂ ಪ್ರೇಮಲತಾ ದಂಪತಿಗಳ ಸುಪುತ್ರಿಯರಾದ ಕುಮಾರಿ ವಿದ್ಯಾಸರಸ್ವತಿ ಮತ್ತು ಕುಮಾರಿ ವಿನಯಪರಮೇಶ್ವರಿ, ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಸಹಿತ ಪ್ರತಿಭಾ ಪುರಸ್ಕಾರ ಪಡೆದ ಕ್ಷಣ.
ಗುರುಕುಲ ಚಾತುರ್ಮಾಸ್ಯದಲ್ಲಿ ಕಾಸರಗೋಡಿನ ಪ್ರತಿಭೆಗಳಿಗೆ ಪುರಸ್ಕಾರ
0
August 09, 2022