ಕೊಚ್ಚಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೋಡಿರುವ ಕುರಿತು ಮಧ್ಯಪ್ರವೇಶಿಸುವಂತೆ ಅಮಿಕಸ್ ಕ್ಯೂರಿ ಮೂಲಕ ಹೈಕೋರ್ಟ್ ಸೂಚಿಸಿದೆ.
ಗುಂಡಿಬಿದ್ದಲ್ಲಿ ಟಾರ್ ಬ್ಯಾಗ್ ನಲ್ಲಿ ಗುಂಡಿ ಇರುವಲ್ಲಿ ಮಾತ್ರ ಅಚಿಟಿಸಿ ತೇಪೆ ಹಾಕÀಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಘಟನೆ ವಿವಾದವಾದ ನಂತರ ಹೈಕೋರ್ಟ್ ಮಧ್ಯಪ್ರವೇಶಿಸಿದೆ.
ತ್ರಿಶೂರ್ ಮತ್ತು ಎರ್ನಾಕುಳಂ ಜಿಲ್ಲಾಧಿಕಾರಿಗಳು ಎಡಪಲ್ಲಿ-ಮನ್ನೂತಿ ಹೆದ್ದಾರಿಯ ನಿರ್ವಹಣೆಯನ್ನು ಪರಿಶೀಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಗುಂಡಿ ತುಂಬುವ ಪ್ರದೇಶಗಳನ್ನು ಪರಿಶೀಲಿಸಿದ ನಂತರ ವರದಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಆದೇಶಿಸಿದ್ದಾರೆ. ಅಮಿಕಸ್ ಕ್ಯೂರಿ ಮೂಲಕ ನ್ಯಾಯಾಲಯ ಈ ಆದೇಶ ನೀಡಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.
ಕಲೆಕ್ಟರ್ ಗಳು ಪ್ರೇಕ್ಷಕರಾಗಬಾರದು. ಅವರಿಗೆ ಅಧಿಕಾರವಿದೆ. ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ರಸ್ತೆ ಹದಗೆಟ್ಟಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸುವ ಅಧಿಕಾರ ಹೊಂದಿರುತ್ತಾರೆ. ಆ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ನಿನ್ನೆ ಹೈಕೋರ್ಟ್ ಸೂಚಿಸಿದೆ. ಆದರೆ ಇಂದು ಅವೈಜ್ಞಾನಿಕವಾಗಿ ಅಗೆಯುತ್ತಿರುವುದನ್ನು ಕಂಡು ನ್ಯಾಯಾಲಯ ಮತ್ತೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ.
ರಸ್ತೆಗುಂಡಿಗಳಿಗೆ ಅಂಟು ಬಳಸಿ ಅಜೆಸ್ಟ್ಮೆಂಟ್: ಮಧ್ಯಪ್ರವೇಶಿಸಿದ ಹೈಕೋರ್ಟ್: ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ
0
August 09, 2022
Tags