HEALTH TIPS

‘ಭಾರತದಲ್ಲಿರುವ ಕ್ರೈಸ್ತರಿಗೆ ಧಾರ್ಮಿಕ ಆಚರಣೆಗೆ ಎಲ್ಲ ನೆರವು ನೀಡಿದವರು ಹಿಂದೂಗಳು’!: ಗುರುಪೂಜೆ ಕಾರ್ಯಕ್ರಮದಲ್ಲಿ ಜೇಕಬ್ ಪುನ್ನೂಸ್


          ತಿರುವಲ್ಲ: ಭಾರತವು ಸಹಿಷ್ಣುತೆಯ ನಾಡಾಗಿದ್ದು, ಹಿಂದೂಗಳು ಕ್ರೈಸ್ತ ಸಮುದಾಯಕ್ಕೆ ಧಾರ್ಮಿಕ ಆಚರಣೆಗೆ ಎಲ್ಲ ನೆರವು ನೀಡಿದ್ದಾರೆ ಎಂದು ರಾಜ್ಯದ ಮಾಜಿ ಪೋಲೀಸ್ ಮುಖ್ಯಸ್ಥ ಜೇಕಬ್ ಪುನ್ನೂಸ್ ಹೇಳಿರುವರು.
            ಆರ್.ಎಸ್.ಎಸ್ ತಿರುವಲ್ಲ ನಗರ ಶಾಖೆಯ ವತಿಯಿಂದ ನಿನ್ನೆ ನಡೆದ ಗುರುಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತೀಯವಾದ ಮತ್ತು ಉಗ್ರವಾದವು ಮಾನವ ಸಮಾಜವನ್ನು ನಾಶಮಾಡುತ್ತಿದೆ ಎಂದರು.
          ಜಗತ್ತಿಗೆ ಜ್ಞಾನವನ್ನು ನೀಡಿದ ದೇಶ ಭಾರತ. ಗುರು-ಶಿಷ್ಯರ ಬಾಂಧವ್ಯಕ್ಕೆ ಭಾರತ ಹೆಚ್ಚಿನ ಮಹತ್ವ ನೀಡಿದೆ. ಭಾರತದಲ್ಲಿ ಗುರುವಿನ ಸ್ಥಾನ ದೇವರಿಗಿಂತ ಉನ್ನತವಾಗಿದೆ. ಪಾಶ್ಚಿಮಾತ್ಯರಿಗೆ ಜ್ಞಾನವನ್ನು ನೀಡುವವನು ಕೇವಲ ಶಿಕ್ಷಕ, ಮತ್ತು ಬೋಧನೆಯು ಕೇವಲ ವೃತ್ತಿಯಾಗಿದೆ. ಆದರೆ ಭಾರತೀಯರಿಗೆ ಜ್ಞಾನವನ್ನು ಕೊಡುವವನು ಗುರು. ಎಲ್ಲವನ್ನೂ ಗುರುವಿಗೆ ಒಪ್ಪಿಸಿ ದೇಶವನ್ನು ಆಳುವ ಸಂಪ್ರದಾಯ ಭಾರತೀಯರದು.
         ಜಗತ್ತಿನಲ್ಲಿ ಮಾನವ ಸಮಾಜವು ಅಭಿವೃದ್ಧಿ ಹೊಂದುತ್ತಿರುವ ಅವಧಿಯಲ್ಲಿ ಭಾರತದಲ್ಲಿ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಶೈಕ್ಷಣಿಕ ಪ್ರಗತಿಯಿಂದಾಗಿ ಭಾರತವು ಸಮೃದ್ಧ ರಾಷ್ಟ್ರವಾಯಿತು. ಆಗ ರೋಮನ್ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಅದರ ಭಾಗವಾಗಿ ರೋಮನ್ನರು ಭಾರತದ ಮೇಲೆ ದಾಳಿ ಮಾಡಿದರು. ಈ ಕಾರಣಕ್ಕಾಗಿಯೇ ವಿದೇಶಿ ರಾಷ್ಟ್ರಗಳು ಭಾರತವನ್ನು ಆಕ್ರಮಿಸಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದವು ಎಂದು ಜೇಕಬ್ ಪುನ್ನೂಸ್ ಹೇಳಿದರು.
         ತಿರುವಲ್ಲ ಶ್ರೀ ರಾಮಕೃಷ್ಣ ಆಶ್ರಮದ ಮಠಾಧೀಶ ಸ್ವಾಮಿ ನಿರ್ವಿಣ್ಣಾನಂದ ಅಧ್ಯಕ್ಷತೆ ವಹಿಸಿದ್ದರು. ಕುರುಕ್ಷೇತ್ರದ ಮುಖ್ಯ ಸಂಪಾದಕ ಕಾ. ಭಾ. ಸುರೇಂದ್ರನ್ ಪ್ರಧಾನ ಭಾಷಣ ಮಾಡಿದರು. ಆರ್.ಎಸ್.ಎಸ್ ಜಿಲ್ಲಾ ಸಂಘಚಾಲಕ್ ಇ. ನಾರಾಯಣನ್, ತಾಲೂಕು ಸಂಘಚಾಲಕ್ ಡಿ. ಪ್ರಸನ್ನಕುಮಾರ್ ಭಾಗವಹಿಸಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries