HEALTH TIPS

ಅಚ್ಯುತಾನಂದರ ಆಡಳಿತಾವಧಿಯಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕ್ರಮಗಳಿಗೂ ಅವಕಾಶವಿರಲಿಲ್ಲ; ಇಂದು ಆಡಳಿತ ಮತ್ತು ವಿರೋಧ ಪಕ್ಷಗಳು ಭಯೋತ್ಪಾದಕರೊಂದಿಗೆ ಕೈಜೋಡಿಸುತ್ತಿವೆ; ವಿ.ಮುರಳೀಧರನ್


              ಆಲಪ್ಪುಳ: ಧಾರ್ಮಿಕ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ನ ಪ್ರಾದೇಶಿಕ ಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಹಾಗೂ ಕಾಂಗ್ರೆಸ್ ಪಂಚಾಯತಿ ಅಧ್ಯಕ್ಷರು ಭಾಗವಹಿಸಿದ್ದನ್ನು ಕೇಂದ್ರ ಸಚಿವ ವಿ.ಮುರಳೀಧರನ್ ತೀವ್ರವಾಗಿ ಟೀಕಿಸಿದ್ದಾರೆ.
         ಮುರಳೀಧರನ್ ಮಾತನಾಡಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಭಯೋತ್ಪಾದಕರ ಜೊತೆ ಸಂಧಿ ಮಾಡುತ್ತಿವೆ. ಕಾರ್ಯಕ್ರಮದ ಪೋಸ್ಟರ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಮುರಳೀಧರನ್ ಪ್ರತಿಕ್ರಿಯೆ ನೀಡಿರುವರು.
        ಪಾಪ್ಯುಲರ್ ಫ್ರಂಟ್ ಕಾರ್ಯಕ್ರಮದಲ್ಲಿ ಮುಖ್ಯ ಸಚೇತಕ ಹಾಗೂ ಕಾಂಗ್ರೆಸ್ ಪಂಚಾಯತಿ ಅಧ್ಯಕ್ಷರು ಭಾಗವಹಿಸುತ್ತಿರುವುದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಭಯೋತ್ಪಾದಕರೊಂದಿಗೆ ಸಂಧಿ ನಡೆಸುತ್ತಿರುವುದನ್ನು ತೋರಿಸುತ್ತದೆ. ಅಚ್ಯುತಾನಂದನ್ ಅವರ ಕಾಲದಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕ್ರಮಗಳಿಗೂ ಅವಕಾಶವಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈಗ ಸಿಪಿಎಂ ಮತ್ತು ಕಾಂಗ್ರೆಸ್ ಭಯೋತ್ಪಾದಕ ಸಂಘಟನೆಗೆ ಬಿಳಿ ಬಣ್ಣ ಬಳಿಯುತ್ತಿವೆ ಎಂದು ವಿ.ಮುರಳೀಧರನ್ ಹೇಳಿದ್ದಾರೆ.
        ಇದೇ ವೇಳೆ ಮುಖ್ಯ ಸಚೇತಕ ಎನ್.ಜಯರಾಜನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಮಜಾಯಿಷಿ ನೀಡಿರುವರು.  ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ, ನೋಟಿಸ್‍ನಲ್ಲಿ ತಮ್ಮ ಹೆಸರನ್ನು ಪ್ರಕಟಿಸಿರುವ ಉದ್ದೇಶ ಸ್ಪಷ್ಟವಾಗಿಲ್ಲ ಎನ್ನುತ್ತಾರೆ ಜಯರಾಜನ್.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries