HEALTH TIPS

ದಿನಚರಿ ತಪ್ಪಿಸದೆ ಉಣ್ಣಿಕಣ್ಣನ ದರ್ಶಿಸಲು ಬಂದ ಜೆಸ್ನಾ ಸಲೀಂ: ಗುರುವಾಯೂರಪ್ಪ ಸನ್ನಿಧಿಗೆ ಬಾಲಕೃಷ್ಣನ ಭಾವಚಿತ್ರ ಸಮರ್ಪಣೆ


                      ಗುರುವಾಯೂರು: ಶ್ರೀಕೃಷ್ಣ ಜಯಂತಿಯ ದಿನದಂದು ಜೆಸ್ನಾ ಸಲೀಂ ಪ್ರತಿವರ್ಷದಂತೆ ಇಂದೂ ಮತ್ತೆ ಗುರುವಾಯೂರಪ್ಪನ ದರ್ಶನ ಪಡೆದರು.
          ಜೆಸ್ನಾ ಅವರು ಗುರುವಾಯೂರಪ್ಪನವರಿಗೆ ದೊಡ್ಡ ಕ್ಯಾನ್ವಾಸ್‍ನಲ್ಲಿ ಉಣ್ಣಿಕಣ್ಣನ್(ಶ್ರೀಬಾಲಕೃಷ್ಣ) ನ ಚಿತ್ರವನ್ನು ಅರ್ಪಿಸಿದರು. ಜೆಸ್ನಾ ಸಲೀಂ ಕೋಝಿಕ್ಕೋಡ್ ಕೋಯಿಲಾಂಡಿ ನಿವಾಸಿ.
            ಕಳೆದ ಎಂಟು ವರ್ಷಗಳಿಂದ ಪ್ರತಿವರ್ಷವೂ ಕೃಷ್ಣ ಜನ್ಮಾಷ್ಟಮಿಯಂದು ಗುರುವಾಯೂರಿಗೆ ಭೇಟಿ ನೀಡಿ ಕೃಷ್ಣನ ಚಿತ್ರ ಸಮರ್ಪಿಸುವುದು ವಾಡಿಕೆಯಾಗಿ ಬೆಳೆಸಿಕೊಂಡಿದ್ದಾರೆ. ವಿಷು ಸಂಕ್ರಾಂತಿಯ ದಿನವೂ ಜೆಸ್ನಾ ಗುರುವಾಯೂರಿಗೆ ಭೇಟಿ ನೀಡುತ್ತಾಳೆ ಮತ್ತು ತನ್ನ ಕೈಯಿಂದ ಚಿತ್ರಿಸಿದ ಶ್ರೀ ಕೃಷ್ಣನ ಚಿತ್ರವನ್ನು ಭಗವಂತನಿಗೆ ಅರ್ಪಿಸುತ್ತಾಳೆ. ಉಣ್ಣಿಕಣ್ಣನ್ ಬೆಣ್ಣೆ ತಿನ್ನುತ್ತಿರುವ ಚಿತ್ರವನ್ನು ಅಷ್ಟಮಿ ರೋಹಿಣಿ ದಿನದಂದು ಜೆಸ್ನಾ ಗುರುವಾಯೂರಿಗೆ ಅರ್ಪಿಸಿದರು.
            ಜೆಸ್ನಾ ಸಲೀಂ ಅವರು ಕೃಷ್ಣ ಭಕ್ತರಿಗಾಗಿ ಅನೇಕ ಚಿತ್ರಗಳನ್ನು ಬಿಡಿಸಿದ ಗಮನಾರ್ಹ ಕಲಾವಿದೆ ಮತ್ತು ಕಣ್ಣನ  ಚಿತ್ರವನ್ನು ಪ್ರಸ್ತುತಪಡಿಸಲು ಪ್ರತಿ ವರ್ಷ ಗುರುವಾಯೂರಿಗೆ ಭೇಟಿ ನೀಡುತ್ತಾರೆ. . ಕಣ್ಣನ ಬಗ್ಗೆ ಇದ್ದ ಅಭಿಮಾನವೇ ಇದಕ್ಕೆ ಕಾರಣ  ಎಂದು ಜೆಸ್ನಾ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಕಣ್ಣನ ಮುಂದೆ ನಿಂತು ಮಾಡುವ ಪ್ರಾರ್ಥನೆ ಇತ್ತೀಚಿನ ದಿನಗಳಲ್ಲಿ ತನಗೆ ತುಂಬಾ ಖುಷಿ ಕೊಡುವ ಸಂಗತಿ ಎನ್ನುತ್ತಾರೆ ಜೆಸ್ನಾ.
            ಏತನ್ಮಧ್ಯೆ, ಈ ವರ್ಷದ ಕೊರೋನಾ ನಿಬರ್ಂಧಗಳಿಲ್ಲದೆ ಮುಕ್ತ ಪ್ರವೇಶದೊಂದಿಗೆ  ಜನ್ಮಾಷ್ಟಮಿ ಆಚರಣೆಗಳು ಗುರುವಾಯೂರಿನಲ್ಲಿ ನಡೆಯುತ್ತಿದೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಗುರುವಾರ ಗುರುವಾಯೂರಿಗೆ ಆಗಮಿಸಿ ದರ್ಶನ ಪಡೆದರು. ಕೃಷ್ಣನ ವೇಷ ಧರಿಸಿದ ಹಲವು ಉಣ್ಣಿಕಣ್ಣನವರು ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಓಡಾಟ ನಡೆಸಿರುವುದು ಕಂಡುಬಂತು.  ಸಂಜೆ ಗುರುವಾಯೂರಿನಲ್ಲಿ ವಿಸ್ತೃತ ಜನ್ಮಾಷ್ಟಮಿ ಆಚರಣೆ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries