ಕಾಸರಗೋಡು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುಕ್ರವಾರ ಕಾಸರಗೋಡಿಗೆ ಭೇಟಿ ನೀಡಿದ ರಾಜ್ಯ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾಜಾರ್ಜ್ ಅವರು ಕರಿಬಾವುಟದ ಪ್ರತಿಭಟನೆ ಎದುರಿಸಬೇಕಾಯಿತು.
ಮೊಗ್ರಾಲ್ ಪುತ್ತೂರಿನ ಯುನಾನಿ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಸಚಿವೆ ಆಗಮಿಸುತ್ತಿದ್ದಂತೆ, ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅವಗಣನೆ ಖಂಡಿಸಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಸಚಿವೆ ವಾಹನದ ಮುಂದೆ ಧುಮುಕಿದ್ದಾರೆ. ಯೂತ್ ಲೀಗ್ ರಾಜ್ಯ ಸಮಿತಿ ಉಪಾಧ್ಯಕ್ಷ ಅಶ್ರಫ್ ಎಡನೀರ್, ಜಿಲ್ಲಾಧ್ಯಕ್ಷ ಅಸೀಫ್ ಕಳತ್ತೂರ್, ಪ್ರಧಾನ ಕಾರ್ಯದರ್ಶಿ ಸಹೀರ್ ಆಶಿಫ್ ನೇತೃತ್ವದಲ್ಲಿ ಕರಿ ಬಾವುಟ ಪ್ರದರ್ಶನ ನಡೆಸಲಾಯಿತು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡು, ಸಚಿವೆ ವಾಹನಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.
ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ-ಯೂತ್ಲೀಗ್ ಕಾರ್ಯಕರ್ತರ ಸೆರೆ
0
August 12, 2022