HEALTH TIPS

ಡಾ.ಕೃಷ್ಣಮೂರ್ತಿಗಳ ಸ್ವ-ಬಲಿದಾನ: ಹೇಳುವುದೇನು?-ಭಾಗ-1


          ಕಾಸರಗೋಡು: ಬದಿಯಡ್ಕದ ದಂತವ್ಯೆದ್ಯ ಡಾ.ಕೃಷ್ಣಮೂರ್ತಿಯವರ ದಾರುಣ ಅಂತ್ಯ ಜಿಲ್ಲೆಯನ್ನು ಬಹುತೇಕ ತಲ್ಲಣಗೊಳಿಸಿದೆ. ಯಾವಳೋ ಖತರ್ನಾಕ್ ರೋಗಿಯೋರ್ವೆಯ ಮಾತನ್ನೇ ಗುರಿಯಾಗಿಸಿ ಬದಿಯಡ್ಕದ ಪಾತಕ ವ್ಯಕ್ತಿಗಳು ಸೇರಿಕೊಂಡು ನಡೆಸಿದ ಹತ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ.
        ಅತ್ಯಂತ ಸಜ್ಜನ, ನಿರಾಡಂಬರಿ ಹಾಗೂ ವೃತ್ತಿಯಲ್ಲಿ ನಿಷ್ಠರಾಗಿದ್ದ ವ್ಯೆದ್ಯರ ಮೃದು ಹೃದಯ ಆಪಾದನೆಯನ್ನು ಸಹಿಸಿ ಮುನ್ನಡೆಯುವಷ್ಟು ಶಕ್ತಿವಂತರಾಗಿರಲಿಲ್ಲ. ಕಾರಣ ಅವರು ಮೇಲ್ವರ್ಗದ ಬ್ರಾಹ್ಮಣರಾಗಿದ್ದರು.
       ಕಾಸರಗೋಡು ಜಿಲ್ಲೆಯಾದ್ಯಂತ ಕಳೆದ ಒಂದೆರಡು ದಶಕಗಳಿಂದ ಅಲ್ಪಸಂಖ್ಯಾತ ಸಮುದಾಯವೆಂದು ಹೇಳಿಕೊಳ್ಳುವ ವರ್ಗವೊಂದು ನಡೆಸುತ್ತಿರುವ ಡಾಂಭಿಕ ಆಟೋಪ ಅಷ್ಟಿಷ್ಟಲ್ಲ. ಮೇಲ್ನೋಟಕ್ಕೆ ಧರ್ಮ, ರಾಜಕೀಯದ ಲೇಪನದೊಂದಿಗೆ ಆ ವರ್ಗ ಮಾಡುತ್ತಿರುವುದು ರಾಕ್ಷಸೀಯ ಪ್ರವೃತ್ತಿ. ಅದಕ್ಕೆ ಯಾವಾಗಲೂ ಮೊದಲು ಬಲಿಯಾಗುವುದು ಬ್ರಾಹ್ಮಣ. ಯಾಕೆಂದರೆ ಅವರು ಬ್ರಾಹ್ಮಣರು.
       ವೈದ್ಯಕೀಯ ಕ್ಷೇತ್ರ ಅತಿ ಸಂಕೀರ್ಣ. ವಿವಿಧ ನಮೂನೆಯ ಸಮಸ್ಯೆಗಳನ್ನು ವೈದ್ಯರ ಬಳಿ ಹೊತ್ತು ತರುವ ವ್ಯಕ್ತಿಯ ನೈಜ ರೋಗಸ್ವರೂಪವನ್ನು ವಿಶ್ಲೇಶಿಸಿ, ವಿಮರ್ಶಿಸಿ ಸಮಗ್ರ ಚಿಂತನೆಗಳಿಂದಷ್ಟೇ ಚಿಕಿತ್ಸೆ ನೀಡಲು ಸಾಧ್ಯ. ಇದಕ್ಕಾಗಿ ರೋಗಿಗಳನ್ನು ಪರಿಶೀಲಿಸುವ ವಿಧಾನಗಳೂ ಹಲವು. ಈ ವೇಳೆ ಹಲವು ಸಂದರ್ಭಗಳಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಕೆಲವೊಮ್ಮೆ ದೇಹದ ವಿವಿಧ ಭಾಗಗಳಿಗೆ ಸ್ಪರ್ಶವಾಗುವುದೂ ಸಹಜವೆ. ಇಲ್ಲಿ ರೋಗಿ ಮತ್ತು ವೈದ್ಯರ ನಡುವೆ ಒಂದುಹಂತದ ಸಮತ್ವ ಅಥವಾ ಒಳಗೊಳ್ಳುವಿಕೆಯ ಮನೋಭಾವ ಬೇಕೇಬೇಕು. ಅಂತಹದನ್ನೆಲ್ಲ ಸಹಿಸೆವೆನ್ನುವವರು ಚಿಕಿತ್ಸೆಗೆ ಒಳಗಾಗದೆ ಸ್ವತಃ ಅನುಭವಿಸುವುದು ಅಥವಾ ಬೇರೇನಾದರೂ (ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆಯುವುದು)ದಾರಿಕಂಡುಕೊಳ್ಳಬಹುದು. ಆದರೆ ಮೊನ್ನೆ ಏನಾಯಿತೆಂದರೆ ಚಿಕಿತ್ಸೆಗೆ ಬಂದ ಮಹಿಳೆ ವೈದ್ಯರು ಬೇರೇನಕ್ಕೋ ಯತ್ನಿಸಿದರೆಂದು ತನ್ನ ಆಂತರ್ಯವನ್ನು ತೆರೆದಿಟ್ಟು ಆ ಮೂಲಕ ತಮ್ಮ ಸಮುದಾಯದ ಒಂದಷ್ಟು ಜನರ ಗಮನ ಕೇಂದ್ರೀಕರಿಸುವಲ್ಲಿ ಯಶಸ್ವಿಯಾದಳು. ಇಂತವನ್ನೆಲ್ಲ ಕಾಯುವ, ಹೊಂಚುಹಾಕುತ್ತಿದ್ದ ತಂಡ ಇದನ್ನೇ ಬಂಡವಾಳವಾಗಿಸಿ ತಮ್ಮ ಬೇಯಿಸಿತು. ಯಾಕೆಂದರೆ ವೈದ್ಯರು ಬ್ರಾಹ್ಮಣರಾಗಿದ್ದರು.
     ಬದಿಯಡ್ಕ, ಕುಂಬಳೆ, ಉಪ್ಪಳ, ಕಾಸರಗೋಡು, ಮುಳ್ಳೇರಿಯ, ಪೈವಳಿಕೆ, ಬಾಯಾರು, ಚೆರ್ಕಳ, ಬಂದ್ಯೋಡು ಮೊದಲಾದೆಡೆ ಸಾಮಾನ್ಯವೆಂಬಂತೆ ಇತ್ತೀಚೆಗೆ ಇಂತಹ ಘಟನೆಗಳನ್ನೇ ರೂಪಿಸುವ, ಬಳಸಿಕೊಳ್ಳುವ ಜಾಲವೇ ಕಾರ್ಯವೆಸಗುತ್ತಿದೆ. ಮತ, ನಂಬಿಕೆಗಳ ಅಡಿಯಲ್ಲಿ ತಮ್ಮ ಕುತ್ಸಿತ ಮನೋಗತವನ್ನು ಪ್ರಾಪ್ತಿಸುವುದಂಷ್ಟೇ ಅಂತವರ ಲಕ್ಷ್ಯ. ದುಡಿಯದೆ, ಬೆವರು ಸುರಿಸದೆ ಹಣ ಸಂಪಾದಿಸುವುದು ಅಂತವರ ಗುರಿ. ನೀವು ಮೇಲೆ ಹೇಳಿದ ಸ್ಥಳಗಳ ಹೋಟೆಲ್ ಗಳು, ದಿನಸಿಅಂಗಡಿಗಳು, ಬಟ್ಟೆ ಅಂಗಡಿಗಳ ಮ್ಹಾಲಕರನ್ನು, ಖಾಸಗೀ ಬಸ್ ಮ್ಹಾಲಕರನ್ನೆಲ್ಲ ಗೌಪ್ಯವಾಗಿ ಕೇಳಿನೋಡಿ, ಬಹುತೇಕರ ಬಳಿಗೂ ಈ ಕ್ಷುದ್ರಜೀವಿಗಳು ಬಂದು ಬೆದರಿಸಿ ಹಣ ವಸೂಲಿ ಮಾಡಿಯೇ ಮಾಡಿರುತ್ತಾರೆ. ವಿವಿಧ ಕಾರಣಗಳನ್ನು ನೀಡಿ. ಇವರಲ್ಲೂ ಬಹುತೇಕ ಸಂತ್ರಸ್ತರು ಬ್ರಾಹ್ಮಣರು. ಕಾರಣ ಅವರು ಬ್ರಾಹ್ಮಣರು.
      ಇತ್ತೀಚಿನ ಕೆಲವು ವರ್ಷಗಿಂದ; ದಶಕದಿಂದ ಬಸ್ ಮೂಲಕ ಸಂಚರಿಸುವ ಮಹಿಳೆಯರಿಗೆ, ಮಾರುಕಟ್ಟೆಗಳಲ್ಲೆಲ್ಲ ಮಹಿಳೆಯರಿಗೆ ಏನೆಲ್ಲ ಅನುಭವಗಳಾಗಿವೆ; ಯಾರಿಂದ ಎಂಬುದನ್ನು ಹೇಳದೆಯೇ ಅರ್ಥೈಸಬಹುದು. ಬಹುತೇಕರು ನುಂಗಿ ಬದುಕುತ್ತಾರೆ; ಹೇಳಕೊಳ್ಳರು.  ಕೆಲವು ವರ್ಷಗಳಿಂದ ಕೇಳಿಬರುವ ಲೌ-ಜಿಹಾದ್ (ಒಳಗೊಪ್ಪಿಕೊಂಡರೂ-ಹೊರಗಿಂದ ಈಗಲೂ ಒಪ್ಪದವರಿದ್ದಾರೆ…ಬಿಡಿ) ಗೆ ಎಲ್ಲ ಪ್ರದೇಶಗಳಿಗಿಂತಲೂ ಹೆಚ್ಚು ನಲುಗಿದ್ದು ಕಾಸರಗೋಡು ಎಂಬುದರಲ್ಲಿ ಸಂಶಯವಿಲ್ಲ. ಇದರ ಮೊದ-ಮೊದಲ ಬಲಿಗಳೂ ಬ್ರಾಹಣರು. ಯಾಕೆಂದರೆ ಅವರು ಬ್ರಾಹ್ಮಣರು.
     ಡಾ.ಕೃಷ್ಣಮೂರ್ತಿಯ ಈ ಪ್ರಕರಣದಲ್ಲಿ ಮುಸ್ಲಿಂಲೀಗ್ ನ ಪ್ರಮುಖ ಇಬ್ಬರು ಮುಖಂಡರು ನೇರ ಶಾಮೀಲಾಗಿದ್ದರೆ. ಕುಂಬ್ಡಾಜೆ ಪಂಚಾಯತಿ ಲೀಗ್ ಕಾರ್ಯದರ್ಶಿ ಅಲಿ ಮತ್ತು ಯೂತ್ ಲೀಗ್ ಅಧ್ಯಕ್ಷ ಶಿಹಾಬ್, ಇತರರಾದ ಫಾರೂಕ್, ಮುನೀರ್, ಬದಿಯಡ್ಕ ಪಂಚಾಯತಿ ಸದಸ್ಯ ಅನ್ವರ ಓಝೋನ್ ಮೊದಲಾದವರು ಪಾತಕರು. ವೈದ್ಯರು ನಾಪತ್ತೆಯಾದ ತಕ್ಷಣ ಸಂಬಂಧಪಟ್ಟವರು ಪೋಲೀಸ್ ಠಾಣೆಗೆ ದೂರುದಾಖಲಿಸಲು ಬಂದಾಗ ಮೊದಲು ಪೋಲೀಸರು ದೂರನ್ನೇ ದಾಖಲಿಸಲು ಸಿದ್ದರಾಗಿರಲಿಲ್ಲ. ಬಳಿಕ ದಂತವೈದ್ಯರ ಜಿಲ್ಲಾ ಸಂಘಟನೆಯ ಪ್ರಮುಖರ ಮಧ್ಯಸ್ಥಿಕೆ; ಒತ್ತಡದಿಂದ ಪೋಲೀಸರು ಪ್ರಕರಣ ದಾಖಲಿಸಲು ಮುಂದಾದರು. ಯಾಕೆಂದರೆ ಇಲ್ಲಿ ಪೋಲೀಸರ ದೃಷ್ಟಿಯಲ್ಲಿ ಮೊದಲ ಅಪರಾಧಿ ನಾಲ್ಕು ದಶಕಗಳಿಂದ ಸೇವೆಯಲ್ಲಿರುವ ಖ್ಯಾತ ವೈದ್ಯರು, ಅದೂ ಬ್ರಾಹ್ಮಣ.
        ಪೋಲೀಸರು ತಕ್ಷಣ ದೂರು ದಾಖಲಿಸಿ, ನಾಪತ್ತೆಯಾದ ವೈದ್ಯರ ಪತ್ತೆಗೆ ಜಾಲ ಬೀಸುತ್ತಿದ್ದರೆ ಬಹುಷಃ ವೈದ್ಯರನ್ನು ಉಳಿಸಬಹುದಿತ್ತೇನೊ. ಆದರೆ ಏನು ಮಾಡೋಣ ವೈದ್ಯರು ಬ್ರಾಹ್ಮಣರು.
     ಅಪರಾಧಿಗಳು ಜಿಹಾದ್ ಹೆಸರಲ್ಲಿ ಈಗಾಗಲೇ ಅನೇಕಾನೇಕ ಪ್ರಕರಣಗಳಲ್ಲಿ ಶಾಮೀಲಾದವರು. ರಾಜಕಾರಣಿ, ಸಮಾಜ ಸೇವಕರ ಹೆಸರಲ್ಲಿ ಇವರು ನಡೆಸುತ್ತಿದ್ದುದು ವಂಚನೆಯ ಪರಮಾವಧಿಯ ಕೃತ್ಯಗಳು. ಜರಾಸಂಧನ ಅಪರವತಾರಗಳು. ಕಾಸರಗೋಡು ಜಲ್ಲೆಯ ಮೂಲೆಮೂಲೆಗಳಲ್ಲೂ ಮೌನವಾಗಿರುವ ಇಂತಹ ನೂರಾರು ಕಥೆಗಳಿವೆ. ಮುಂದಿನ ಭಾಗಗಳಲ್ಲಿ ಅವನ್ನು ಈಗಲಾದರೂ ಬಿಡಿಸಿಡಲೇ ಬೇಕು. ಯಾಕೆಂದರೆ ನಾನೂ ಒಬ್ಬ ಬ್ರಾಹ್ಮಣನೆ!


  ಮುಂದುವರಿಯುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries