HEALTH TIPS

ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಸೋದರ ಸಂಬಂಧಿಯ ಹತ್ಯೆ

 

               ಪಾಲಕ್ಕಾಡ್‌ : 'ಸಾಕು ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಹತ್ಯೆ ಮಾಡಿದ್ದಾನೆಂದು ಹೇಳಲಾದ ಹಕೀಂ (27) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.

               ಅರ್ಷದ್‌ (21) ಎಂಬಾತ ಮೃತ ವ್ಯಕ್ತಿ. ಈ ಘಟನೆ ಗುರುವಾರ ರಾತ್ರಿ ನಡೆದಿದೆ.

                     'ಗಾಯಾಳು ಮೃತಪಟ್ಟ ಘಟನೆಯ ಬಗ್ಗೆ ಆಸ್ಪತ್ರೆಯೊಂದರ ವೈದ್ಯರು ನಮಗೆ ಮಾಹಿತಿ ನೀಡಿದರು. ಹಕೀಂನನ್ನು ಶನಿವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಕೀಂ, ಅರ್ಷದ್ ಮೇಲೆ ಸಾಂದರ್ಭಿಕವಾಗಿ ಹಲ್ಲೆ ನಡೆಸಿದಾಗ ಈ ಘಟನೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ' ಎಂದೂ ಪೊಲೀಸರು ಹೇಳಿದರು.

               'ಹಕೀಂ ಇಲ್ಲಿ (ಪಾಲಕ್ಕಾಡ್‌) ವ್ಯಾಪಾರವನ್ನು ಮಾಡುತ್ತಿದ್ದ. ಆತನೊಂದಿಗೆ ಅರ್ಷದ್ ಕೂಡ ಕೆಲಸ ಮಾಡುತ್ತಿದ್ದ. ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಈ ಹಿಂದೆಯೂ ಹಕೀಂ, ಅರ್ಷದ್‌ನನ್ನು ಥಳಿಸಿರುವುದು ಗೊತ್ತಾಗಿದೆ. ಆದರೆ, ಈ ಬಾರಿ ನಾಯಿಯ ಬೆಲ್ಟ್ ಮತ್ತು ದೊಣ್ಣೆಯಿಂದ ಮಾರಣಾಂತಿಕವಾಗಿ ಥಳಿಸಿದ್ದಾನೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries