HEALTH TIPS

ಕ್ರೀಡಾಕೂಟಗಳಿಂದ ಸಂಘಟನೆ ಬಲಿಷ್ಠವಾಗುತ್ತದೆ: ಜಯದೇವ ಖಂಡಿಗೆ: ಮುಳ್ಳೇರಿಯ ಮಂಡಲದ ಯುವಕ್ರೀಡಾಕೂಟ 2022

           
        ಬದಿಯಡ್ಕ: ಕ್ರೀಡೆಯಿಂದ ಮಾನಸಿಕವಾಗಿಯೂ ಶಾರೀರಿಕವಾಗಿಯೂ ವ್ಯಕ್ತಿ ಸುದೃಢನಾಗುತ್ತಾನೆ. ಸಮಾಜದ ಯುವ ಪ್ರತಿಭೆಗಳ ಪಾಲ್ಗೊಳ್ಳುವಿಕೆಯ ಮೂಲಕ ನಡೆಯುವ ಕ್ರೀಡಾಕೂಟಗಳು ಸಂಘಟನೆಯನ್ನು ಬಲಿಷ್ಠಗೊಳಿಸುತ್ತದೆ. ಇಂತಹ ಅವಕಾಶಗಳು ಒದಗಿಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಹೆತ್ತವರು ಮುತುವರ್ಜಿವಹಿಸಬೇಕು. ತಮ್ಮ ಮನೆಯ ಸದಸ್ಯರನ್ನು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಮಾಡುವುದು ತನ್ನ ಕರ್ತವ್ಯವೆಂಬುದನ್ನು ಮನಗಾಣಬೇಕು ಎಂದು ನೀರ್ಚಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು.
          ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ಯುವವಿಭಾಗದ ನೇತೃತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪರಿಸರದಲ್ಲಿ ಜರಗಿದ `ಯುವ ಕ್ರೀಡಾಕೂಟ 2022'ನ್ನು ಉದ್ಘಾಟಿಸಿ ಅವರು ಮಾತನಾಡಿದರು.
         ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಧ್ವಜಾರೋಹಣಗೈದು ಮಾತನಾಡಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಮಹಾಮಂಡಲ ಮಾತೃಪ್ರಧಾನ ಈಶ್ವರಿ ಬೇರ್ಕಡವು ಉಪಸ್ಥಿತರಿದ್ದರು. ಮಂಡಲದ 11 ವಿವಿಧ ವಲಯಗಳಿಂದ ಕ್ರೀಡಾಳುಗಳು ಪಾಲ್ಗೊಂಡಿದ್ದರು. ಕಬಡ್ಡಿ, ಬ್ಯಾಡ್ಮಿಂಟನ್, ಕ್ರಿಕೆಟ್, ಹಗ್ಗಜಗ್ಗಾಟ, ಓಟ ಸ್ಪರ್ಧೆಗಳು, ಚೆಂಡೆಸೆತ, ಚೆಸ್, ಕ್ಯಾರಂ ಮೊದಲಾದ ಸಧೆರ್Éಗಳಲ್ಲಿ ಯುವಕ ಯುವತಿಯರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿವಾಹಿನಿ ಪ್ರಮುಖ ಶ್ಯಾಮಪ್ರಸಾದ ಕುಳಮರ್ವ, ಗುರುಮೂರ್ತಿ ಮೇಣ ನಿರೂಪಿಸಿದರು.  ಯವವಿಭಾಗ ಪ್ರಧಾನ ಕೇಶವ ಪ್ರಕಾಶ ಮುಣ್ಚಿಕ್ಕಾನ ನೇತೃತ್ವ ವಹಿಸಿದ್ದರು. ಮಂಡಲದ ಇತರ ಪದಾಧಿಕಾರಿಗಳು, ಗುರಿಕ್ಕಾರರು, ಶಿಷ್ಯವೃಂದದವರು ಪಾಲ್ಗೊಂಡಿದ್ದರು. ನೀರ್ಚಾಲು ವಲಯದ ನೇತೃತ್ವದಲ್ಲಿ ಮಂಡಲ ಮಾತೃವಿಭಾಗದ ಸಹಕಾರದೊಂದಿಗೆ ಊಟೋಪಚಾರಗಳ ವ್ಯವಸ್ಥೆಯನ್ನು ಮಾಡಲಾಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries