ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ರಾಗ ನೈವೇದ್ಯ ಭಕ್ತಿ - ಭಾವ ಗೀತೆ ಕಾರ್ಯಕ್ರಮ ನಡೆಯಿತು.
ಯುವ ಕಲಾವಿದರನ್ನು ಸೃಷ್ಟಿಸುವ ಕೆಲಸ ಇಂದು ಅಗತ್ಯವಾಗಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಂಗ ಚಿನ್ನಾರಿ ಯುವ ಕಲಾವಿದರನ್ನು ಸೃಷ್ಟಿಸುತ್ತಾ, ಪೆÇ್ರೀತ್ಸಾಹಿಸುತ್ತಾ ಮಹತ್ವದ ಕೆಲಸ ಮಾಡುತ್ತಿದೆ ಎಂದು ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಐ.ಭಟ್ ಹೇಳಿದರು. ಅವರು ರಾಗ ನೈವೇದ್ಯ ಭಕ್ತಿ-ಭಾವಗೀತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ನಗರಸಭಾ ಸದಸ್ಯೆ ಹೇಮಲತಾ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದರು. ನಗರಸಭಾ ಸದಸ್ಯೆ ವೀಣಾ ಅರುಣ ಶೆಟ್ಟಿ, ನಗರಸಭಾ ಸದಸ್ಯೆ ಶ್ರೀಲತಾ ಎಂ., ಹಿರಿಯ ಭರತನಾಟ್ಯ ಕಲಾವಿದೆ ಚಿತ್ರಲೇಖಾ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹೆಸರು ಬಹಿರಂಗ ಪಡಿಸಲು ಬಯಸದ ಉದಾರ ಮನಸ್ಸಿನ ವ್ಯಕ್ತಿಯೋರ್ವರು ನೀಡಿದ ಹಾರ್ಮೋನಿಯಂ ಮತ್ತು ತಬಲಾವನ್ನು ಹಿರಿಯ ಸಾಹಿತಿ ನರಸಿಂಗ ರಾವ್ ಅವರು ರಂಗ ಚಿನ್ನಾರಿ ಸಂಸ್ಥೆಗೆ ಹಸ್ತಾಂತರಿಸಿದರು.
ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ನುಡಿದು ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಹಿಂದುಸ್ಥಾನಿ ಗಾಯಕಿ ಸ್ವರ ಸರಸ್ವತಿ ಸುಜಾತಾ ಗುರವ್ ಹಾಗು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕಿ, ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕøತೆ ಸೀಮಾ ರಾಯ್ಕರ್ ಅವರಿಂದ ರಾಗ ನೈವೇದ್ಯ ಭÀಕ್ತಿ ಭಾವ ಗೀತೆ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ದೇವದತ್ತ ಪ್ರಭು, ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ ಸಹಕರಿಸಿದರು.
ಪದ್ಮಗಿರಿ ಕಲಾಕುಟೀರದಲ್ಲಿ ರಾಗ ನೈವೇದ್ಯ ಭಕ್ತಿ ಭಾವ ಗೀತೆ ಕಾರ್ಯಕ್ರಮ
0
December 13, 2022