HEALTH TIPS

ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಭಾರೀ ಭದ್ರತಾ ಲೋಪ; ಮೇಣದ ಬತ್ತಿ ಹಚ್ಚಿದ ಅನ್ಯರಾಜ್ಯ ನೃತ್ಯ ಕಲಾವಿದರು: ಪ್ರತಿಭಟನೆ


           ತಿರುವನಂತಪುರಂ: ಶ್ರೀಪದ್ಮನಾಭ ಸ್ವಾಮಿ ದೇಗುಲದಲ್ಲಿ ಭಾರೀ ಭದ್ರತಾ ಲೋಪವಾಗಿದೆ. ಬೇರೆ ರಾಜ್ಯಗಳಿಂದ ಬಂದವರು ದೇವಸ್ಥಾನದಲ್ಲಿ ದೀಪಾಲಂಕಾರ ಮಾಡಿದರು.
           ಘಟನೆ ಭಾನುವಾರ ನಡೆದಿದೆ. ವಿಜಯವಾಡದ ಕೂಚುಪುಡಿ ತಂಡದವರು ದೇವರಿಗೆ ಮೇಣದ ಬತ್ತಿ ಬೆಳಗಿಸಿದರು. ತುಲಾಭಾರ ಮಂಟಪದಲ್ಲಿ ನೃತ್ಯ ಮಾಡಲು ಅನುಮತಿ ನೀಡಲಾಗಿತ್ತು. ಅವರು ನೃತ್ಯ ಮಾಡಲು ಪ್ರಾರಂಭಿಸುವ ಮೊದಲು ಗುಂಪು ಮೇಣದಬತ್ತಿಗಳನ್ನು ಬೆಳಗಿಸುತ್ತಿತ್ತು. ಪಕ್ಕದಲ್ಲಿದ್ದವರು ಗಲಾಟೆ ಮಾಡಿದಾಗ ಭದ್ರತಾ ಸಿಬ್ಬಂದಿ ಆಗಮಿಸಿ ಮೇಣದ ಬತ್ತಿಯನ್ನು ನಂದಿಸಿದ್ದಾರೆ. ದೇವಾಲಯದ ಒಳಗೆ ಮೇಣದಬತ್ತಿಗಳನ್ನು ಉರಿಸುವಂತಿಲ್ಲ.  ದೇಗುಲದ ಭದ್ರತಾ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಅವರ ಕಡೆಯಿಂದ ತೀವ್ರ ಲೋಪವಾಗಿರುವುದಾಗಿ ಹೇಳಲಾಗಿದೆ.
           ಈ ಘಟನೆ ವಿವಾದಕ್ಕೀಡಾಗುತ್ತಿದ್ದಂತೆ ಭದ್ರತಾ ವಿಭಾಗವು ಮೇಣದ ಬತ್ತಿಯಾಗಿರಲಿಲ್ಲ, ಸಣ್ಣ ಬತ್ತಿಗಳಿಂದ ದೀಪ ಬೆಳಗಿಸಲಾಗಿತ್ತೆಂದು  ಸಮರ್ಥನೆ ನೀಡಿದೆ.  ಧಾರ್ಮಿಕ ವಿಧಿವಿಧಾನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಭಕ್ತರು ಪ್ರತಿಭಟನೆ ನಡೆಸಿದರು. ದೇವಸ್ಥಾನದ ಭದ್ರತೆಯಲ್ಲಿ ಆಗಾಗ ಗಂಭೀರ ಲೋಪ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ದೇವಾಲಯದ ಒಳಗೆ ಮತ್ತು ಹೊರಗೆ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ಹಲವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಭಕ್ತರು ಗಮನಸೆಳೆದಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries