HEALTH TIPS

ಜಿಲ್ಲೆಯಲ್ಲಿ ಟೈಫಾಯಿಡ್ ಶಂಕಿತ ಪ್ರಕರಣ ಪತ್ತೆ- ಜಾಗ್ರತೆ ಪಾಳಿಸಲು ಡಿಎಂಓ ಸೂಚನೆ



          ಜಿಲ್ಲೆಯಲ್ಲಿ ಟೈಫಾಯಿಡ್ ಶಂಕಿತ ಪ್ರಕರಣಗಳು ವರದಿಯಾಗಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ. ರಾಮದಾಸ್ ಮಾಹಿತಿ ನೀಡಿದ್ದಾರೆ.  ಓರಿಯೆಂಟಿಯಾ ಸುಜುಗಮುಶಿ ಎಂಬ ಬ್ಯಾಕ್ಟೀರಿಯಂನಿಂದ ಉಂಟಾಗುವ ಸಾಂಕ್ರಾಮಿಕ ರೋಗ ಇದಾಗಿದ್ದು,  ಇಲಿ, ಅಳಿಲು, ಮೊಲ ಇತ್ಯಾದಿಗಳಲ್ಲಿ ಬ್ಯಾಕ್ಟೀರಿಯಾ ಕಂಡುಬರುತ್ತಿದ್ದು, ಇವುಗಳ ಮೈಮೇಲಿನ ಎಳೆಯ ಕೀಟಗಳ ಕಚ್ಚುವಿಕೆಯಿಂದ ಮನುಷ್ಯರಿಗೆ ಹರಡುತ್ತದೆ.
            ಸೋಂಕಿತ ಕೀಟ ಕಚ್ಚಿದ ವಾರದ ನಂತರ ಜ್ವರ ಕಾಣಿಸಿಕೊಳ್ಳುತ್ತದೆ. ಜತೆಗೆ ತಲೆನೋವು, ಹಸಿವಿನ ಕೊರತೆ, ದೇಹ ಮತ್ತು ಸ್ನಾಯು ನೋವು ಈ ರೋಗದ ಪ್ರಮುಖ ಲಕ್ಷಣವಾಗಿದೆ. ಕೆಲವು ರೋಗಿಗಳು ವಾಕರಿಕೆ, ವಾಂತಿ ಅಥವಾ ಅತಿಸಾರವನ್ನು ಅನುಭವಿಸುತ್ತಾರೆ. ರೋಗವು ಮುಂದುವರೆದಲ್ಲಿ ಇದು ಮೂತ್ರಪಿಂಡ, ಹೃದಯ, ಶ್ವಾಸಕೋಶ ಮತ್ತು ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
                      ತಡೆಗಟ್ಟುವ ವಿಧಾನ:
              ಉರುವಲು ಸಂಗ್ರಹಿಸುವವನು, ದನಗಳನ್ನು ಸಾಕುವವನು, ಕೃಷಿ ಸ್ವಚ್ಛತೆ ಮಾಡುವವನು, ರಬ್ಬರ್ ಟ್ಯಾಪಿಂಗ್ ಮುಂತಾದ ಪೆÇದೆ ಕೆಲಸ ಮಾಡುವವರು ದೇಹ ಆವರಿಸುವ ಬಟ್ಟೆಗಳನ್ನು ಧರಿಸಬೇಕು. ಕೆಲಸದ ನಂತರ ತಕ್ಷಣ ಸಾಬೂನು ಬಳಸಿ ಬಿಸಿ ನೀರ ಸ್ನಾನ ಮಾಡಬೇಕು.
            ಕೀಟ ನಿವಾರಕ ಸಇಂಪಡಣೆ, ಜಿಗಣೆ ಸೇರಿಕೊಳ್ಳಲು ಸಾಧ್ಯತೆಯಿರುವುದರಿಂದ ಮನೆ ಸುತ್ತು ಶುಚೀಕರಣ ಪಾಲಿಸಬೇಖು, ಇಲಿ ಸಂತಾನೋತ್ಪತ್ತಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries