ಕಾಸರಗೋಡು: ಜಿಲ್ಲೆಯಲ್ಲಿ ವಸತಿ ರಹಿತ ಹಾಗೂ ವಸತಿ ರಹಿತ ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಪರಿಹರಿಸಲು, ಹಕ್ಕುಪತ್ರ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪರಿಶಿಷ್ಟ ಪಂಗಡದ ಪ್ರವರ್ತಕರು ಫೆ.4ರಂದು ವಿವಿಧ ಕಾಲೋನಿಗಳಿಗೆ ಭೇಟಿ ನೀಡಿ, ಹಕ್ಕುಪತ್ರಗಳಿಗಾಗಿರುವ ಅರ್ಜಿಗಳನ್ನು ಸಂಗ್ರಹಿಸಿ ತಹಸೀಲ್ದಾರರಿಗೆ ರವಾನಿಸಬೇಕು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ನಿರ್ದೇಶ ನೀಡಿದ್ದಾರೆ.
ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳು ಈ ಸೂಚನೆ ನೀಡಿದರು. ಕಾಸರಗೋಡು, ಎಣ್ಮಕಜೆ ಮತ್ತು ನೀಲೇಶ್ವರ ಪರಿಶಿಷ್ಟ ಪಂಗಡದ ವಿಸ್ತರಣಾ ಕಛೇರಿಗಳಲ್ಲಿ ಹಕ್ಕುಪತ್ರಗಳಿಲ್ಲದ ಬಗ್ಗೆ ಮಾಹಿತಿಯನ್ನು ಪ್ರವರ್ತಕರ ನೆರವಿನಿಂದ ಒಟ್ಟು 700 ಮಂದಿಯ ವಿವರ ಸಂಗ್ರಹಿಸಿ ತಾಲೂಕಿನ ಸಂಬಂಧಪಟ್ಟ ತಹಸೀಲ್ದಾರರಿಗೆ ಕಳುಹಿಸಲಾಗಿದೆ ಎಂದು ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದರು.
ಪುರುಂಬೋಕ್ ನಲ್ಲಿ ನೆಲೆಸಿರುವ 309 ಪರಿಶಿಷ್ಟ ಪಂಗಡಗಳ ಮಾಹಿತಿಯನ್ನು ವೆಳ್ಳರಿಕುಂಡ್ ತಹಸೀಲ್ದಾರ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಗಿರಿಜನ ಅಭಿವೃದ್ಧಿ ಅಧಿಕಾರಿ ಪರಪ್ಪ ಮಾಹಿತಿ ನೀಡಿದರು. ಅವುಗಳಲ್ಲಿ 245 ಮಂದಿ ಸರ್ಕಾರಿ ಪರಂಬೋಕ್ನಲ್ಲಿದ್ದರೆ, ಇನ್ನು ಕೆಲವರು ಕುಟುಂಬದಲ್ಲಿ ಪಾಲು ಇಲ್ಲದ ಕಾರಣ ಜಾಗ ಹೊಂದಿಲ್ಲ ಎಂದು ತಿಳಿಸಲಾಗಿದೆ. ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಇ.ಚಂದ್ರಶೇಖರನ್ ಈ ವಿಷಯ ಪ್ರಸ್ತಾಪಿಸಿದರು. ಕಡು ಬಡವರು, ನಿವೇಶನ ರಹಿತರು ಹಾಗೂ ನಿವೇಶನ ರಹಿತ ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಪರಿಶಿಷ್ಟ ಪಂಗಡಗಳಿಗೆ ಹಕ್ಕುಪತ್ರ ನೀಡುವಾಗ 15 ಸೆಂಟ್ಸ್ ಎಂದು ನಿಗದಿ ಮಾಡಬಾರದು ಹಾಗೂ 2011ರ ಸುತ್ತೋಲೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಕಾಲನಿಗೆ ತೆರಳಿ ಸಂಗ್ರಹಿಸಬೇಕು-ಜಿಲ್ಲಾಧಿಕಾರಿ ಸೂಚನೆ
0
January 29, 2023
Tags