HEALTH TIPS

ದೇವರೇ..! ಹೀಗೂ ಉಂಟೇ: ಒಂದೇ ದಿನ ಎರಡು ಬಾರಿ ಉದ್ಘಾಟನೆಗೊಂಡ ಅಂಗನವಾಡಿ ಕಟ್ಟಡ


            ಕೊಟ್ಟಾಯಂ: ಅಂಗನವಾಡಿ ಕಟ್ಟಡವನ್ನು ಸ್ಪರ್ಧಾತ್ಮಕವಾಗಿ ಎರಡು ಬಾರಿ ಉದ್ಘಾಟಿಸಿದ ಘಟನೆ ನಡೆದಿದೆ. ರಾಜಕೀಯ ರಂಗಗಳ ಒಳಜಗಳದಿಂದ ಶಾಸಕ ಹಾಗೂ ಸಂಸದರು ಒಂದೇ ಕಟ್ಟಡವನ್ನು ಪ್ರತ್ಯೇಕವಾಗಿ ಉದ್ಘಾಟಿಸಿದರು.
       ಕೊಟ್ಟಾಯಂ ಪ್ರವಿತಾನಂ ಮಾರ್ಕೆಟ್‍ನಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಭಾನುವಾರ ಕಟ್ಟಡವನ್ನು ಪಾಲಾ ಶಾಸಕ ಮಣಿ.ಸಿ. ಕಾಪ್ಪನ್  ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯುಡಿಎಫ್ ಆಡಳಿತವಿರುವ ಪಂಚಾಯತಿ ಶಾಸಕರು ಭಾಗವಹಿಸಿದ್ದರು. ಶಾಸಕರು ಉದ್ಘಾಟನೆ ಮುಗಿಸಿ ವಾಪಸಾದ ನಂತರ ಎಡ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ವಾಲಿಪ್ಳಕಲ್ ನೇತೃವದಲ್ಲಿ ಎರಡನೇ ಕಾರ್ಯಕ್ರಮವನ್ನು ಸಂಸದ ಥಾಮಸ್ ಚಾಜಿಕ್ಕಡನ್ ಉದ್ಘಾಟಿಸಿದರು.
        ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಜಂಟಿಯಾಗಿ ಕಟ್ಟಡವನ್ನು ನಿರ್ಮಿಸಿತ್ತು. ಆದರೆ ಪಂಚಾಯಿತಿ ಆಡಳಿತ ನಡೆಸುತ್ತಿರುವ ಯುಡಿಎಫ್, ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸದೆ ಜಿಲ್ಲಾ ಪಂಚಾಯಿತಿ ಸದಸ್ಯರು ತಾವಾಗಿಯೇ ಯೋಜನೆ ಉದ್ಘಾಟನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಅಂಗನವಾಡಿ ಕಟ್ಟಡಕ್ಕೆ ಹಣ ಮಂಜೂರಾತಿಗೆ ಜಿಲ್ಲಾ ಪಂಚಾಯಿತಿ ಸದಸ್ಯರು ಮಾಡಿದ ಪ್ರಯತ್ನವನ್ನು ಯುಡಿಎಫ್ ಕಡೆಗಣಿಸುತ್ತಿದೆ ಎಂದು ಎಲ್ ಡಿಎಫ್ ದೂರಿದೆ. ಎರಡೂ ಉದ್ಘಾಟನೆಗೆ ನಾಡಿನ ತೆರಿಗೆ ಹಣ ಖರ್ಚಾಗಿದೆ ಎಂದು ಸ್ಥಳೀಯರು ಬೊಟ್ಟು ಮಾಡುತ್ತಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries