ಮಂಜೇಶ್ವರ: ಭಾಷೆಯ ಬೆಳವಣಿಗೆಯ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳುವುದು ಭಾಷೆಯನ್ನು ಉಳಿಸುವ ಮುಖ್ಯ ಮಾರ್ಗವಾಗಿದೆ ಎಂದು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಸಚ್ಚಿದಾನಂದನ್ ಹೇಳಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಶುಕ್ರವಾರ ಆಯೋಜಿಸಿದ್ದ ‘ಗಿಳಿವಿಂಡು’ ಬಹುಭಾಷಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲಿ ಭಾಷೆಗಳನ್ನು ರಕ್ಷಿಸಲು ಮತ್ತು ಭಾಷೆಗಳನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ, ಸಾಮಾಜಿಕ ಚಿಂತನೆ ಮತ್ತು ಸಂಸ್ಕøತಿಯನ್ನು ಒಂದೇ ಭಾಷೆಗೆ ನಿಕ್ಷಿಪ್ತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಭಾಷೆಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿಯೊಂದು ಭಾಷೆಯು ಅಭಿವೃದ್ಧಿ ಮತ್ತು ರಚನೆಯ ಇತಿಹಾಸವನ್ನು ಹೊಂದಿದೆ. ಬಹುಭಾಷಾ ಸಮ್ಮೇಳನದಲ್ಲಿ ಏಕಭಾμÉಯತ್ತ ನಡೆಯ ವಿರುದ್ಧ ಪ್ರತಿರೋಧವೂ ಆರಂಭವಾಗಿದೆ. ಭಾಷೆಗಳನ್ನು ಉಳಿಸುವ ಮೂಲಕ ಸಂಸ್ಕೃತಿ ಮತ್ತು ಪ್ರಾದೇಶಿಕ ಗುಣಲಕ್ಷಣಗಳನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿಜ್ಞೆ ತೆಗೆದುಕೊಳ್ಳಬೇಕು ಮತ್ತು ಇದು ಬಹುಭಾಷಾ ಸಮ್ಮೇಳನದ ಅಂತಿಮ ಸಂದೇಶವಾಗಿದೆ ಎಂದು ಅವರು ಹೇಳಿದರು.
ಭಾಷೆಗಳು ಪ್ರಪಂಚದ ದೃಷ್ಟಿಕೋನಗಳಾಗಿವೆ. ಭಾಷೆ ಸತ್ತಾಗ ಜಗತ್ತನ್ನು ನೋಡುವ ರೀತಿ ಸಾಯುತ್ತದೆ. ಯಾವುದೇ ಒಂದು ಭಾಷೆ ನಮ್ಮ ಭಾಷೆ ಎಂದು ಹೇಳಿದರೆ ಅಪಾಯವಿದೆ. ಪ್ರತಿಯೊಬ್ಬರೂ ಆ ಭಾಷೆಯಲ್ಲಿ ಮಾತನಾಡಬೇಕು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಲು ಪ್ರಾರಂಭಿಸಿದ ಕ್ಷಣ, ಭಾರತದ ಶ್ರೇಷ್ಠ ಕಲ್ಪನೆಯು ಕುಸಿಯುತ್ತದೆ. ಬಹುಮುಖಿ ಚರ್ಚೆಗಳನ್ನು ಮೌನವಾಗಿಸಿ ಸದ್ದಡಗಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ವಿಭಿನ್ನ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವುದು ಹೊಸ ಯುಗದಲ್ಲಿ ಇಡೀ ರಾಷ್ಟ್ರದ ಕಾರ್ಯವಾಗಿದೆ ಎಂದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ ಹಾಗೂ ಸಾಹಿತಿ ಡಾ.ಕೆ.ಚಿನ್ನಪ್ಪ ಗೌಡ, ಸಾಹಿತಿ ಡಾ.ಇ.ವಿ.ರಾಮಕೃಷ್ಣನ್ ಉಪನ್ಯಾಸ ನೀಡಿದರು.
ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀನ್ ಲೆವಿನೋ ಮೊಂತೆರೊ, ಕೇರಳ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಅಶೋಕನ್ ಚರುವಿಲ್, ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯರಾದ ಇ.ಪಿ.ರಾಜಗೋಪಾಲನ್, ಎಂ.ಕೆ.ಮನೋಹರನ್, ರಾವುಣ್ಣಿ, ಲೈಬ್ರರಿ ಕೌನ್ಸಿಲ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ವಿ.ಕುಂಞÂರಾಮನ್, ಸಾಹಿತಿ ಡಾ.ಎ.ಎಂ.ಶ್ರೀಧರನ್ ಮೊದಲಾದವರು ಮಾತನಾಡಿದರು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಸ್ವಾಗತಿಸಿ, ಡಿ.ಕಮಲಾಕ್ಷ ವಂದಿಸಿದರು.
ಭಾಷಾ ಬೆಳವಣಿಗೆಗೆ ಷರತ್ತುಗಳನ್ನು ಕಾಯ್ದುಕೊಳ್ಳಬೇಕು: ಕೆ ಸಚ್ಚಿದಾನಂದನ್: ಮಂಜೇಶ್ವರದಲ್ಲಿ ಬಹುಭಾಷಾ ಸಮ್ಮೇಳನ ಉದ್ಘಾಟಸಿ ಅಭಿಮತ
0
January 06, 2023
Tags