HEALTH TIPS

ಮಾಣಿಲ ಶ್ರೀಧಾಮದಲ್ಲಿ ನಿರ್ಮಲ ಶೇಷಪ್ಪರವರ ಮಣ್ಣ್ ದ ರುಣೊ ತುಳು ಕವನ ಸಂಕಲನ ಬಿಡುಗಡೆ


             ಪೆರ್ಲ : ಶೇಷ ಪ್ರಕಾಶನ ಖಂಡಿಗೆ ಪೆರ್ಲ ಇದರ ಆಶ್ರಯದಲ್ಲಿ ಉದಯೋನ್ಮುಖ ಕವಯಿತ್ರಿ  ನಿರ್ಮಲಾ ಶೇಷಪ್ಪ ಕುಲಾಲ್ ಅವರ 'ಮಣ್ಣ್ ದ ರುಣೊ' ಚೊಚ್ಚಲ ತುಳು ಕವನ ಸಂಕಲನ ಬಿಡುಗಡೆ ಸಮಾರಂಭ   ಶ್ರೀಧಾಮ ಮಾಣಿಲದಲ್ಲಿ ಜರಗಿತು.
        ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಈ ಲೋಕದ ಪಂಚಭೂತದ ಋಣಗಳನ್ನು ತೀರಿಸಲು ಮಾನವ ಜನ್ಮದಿಂದ ಅಸಾಧ್ಯವಾಗಿದ್ದು ನಾವು ಮಾಡುವ ಕೈಂಕರ್ಯದಿಂದμÉ್ಟ ಅದರ ಸಫಲತೆ ಪ್ರಾಪ್ತಿ ಸಾಧ್ಯ ಎಂದರು. ಮಾತೃ ಋಣ ಹಾಗೂ ಮಣ್ಣಿನ ಋಣ ಮನುಷ್ಯನಿಗೆ ಯಾವ  ಜನ್ಮದಲ್ಲೂ ತೀರಿಸಲಾಗದ್ದಾಗಿದ್ದು ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತುಳು ಪದ ಪುಂಜಗಳ ಸಾಹಿತ್ಯದ ಸತ್ವ ಪುಸ್ತಕದ ಮೂಲಕ ಸಮಾಜಕ್ಕೆ ಸಮರ್ಪಿಸಿದ ಕವಯಿತ್ರಿಯ ಸಾಧನೆ ಶ್ಲಾಘನೀಯ ಎಂದರು.  ಹಿರಿಯ ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆವಹಿಸಿದ್ದರು.



            ತುಳು,ಕನ್ನಡ ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು ಕೃತಿ ಪರಿಚಯ ನಡೆಸಿದರು.ಹಿರಿಯ ಸಾಹಿತಿ,ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ,ಮಂಗಳೂರು ಆಕಾಶವಾಣಿಯ ನಿರೂಪಕ ಪ್ರವೀಣ್ ಅಮ್ಮೆಂಬಳ, ಕುಲಾಲ ಸಮಾಜ ಎಣ್ಮಕಜೆ ಪಂಚಾಯತಿ ಸಮಿತಿ ಅಧ್ಯಕ್ಷ ಸೀತಾರಾಮ ಒಳಮೊಗರು ಶುಭಾಶಂಸನೆಗೈದರು. ಕೃತಿಗಾರ್ತಿ ನಿರ್ಮಲಾ ಶೇಷಪ್ಪ ಕುಲಾಲ್ ಖಂಡಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕವನ ಸಂಕಲನದ ಮುಖಚಿತ್ರ ರಚಿಸಿದ ಸತೀಶ್ ಕುಲಾಲ್ ವಾಣಿನಗರ ಅವರನ್ನು ಸ್ವಾಮೀಜಿಗಳು  ಸನ್ಮಾನಿಸಿದರು.
         ಬಳಿಕ ಜರಗಿದ ಕವಿಗೋಷ್ಠಿಗೆ ವ್ಯಂಗ್ಯಚಿತ್ರಗಾರ,ಕವಿ,ವೆಂಕಟ್ ಭಟ್ ಎಡನೀರು ಚಾಲನೆ ನೀಡಿದರು. ಗುಣಾಜೆ ರಾಮಚಂದ್ರ ಭಟ್, ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ, ಪ್ರೇಮ ಕಣ್ವತೀರ್ಥ, ಉಮೇಶ್ ಶಿರಿಯಾ, ಪ್ರಮೀಳಾ ಚುಳ್ಳಿಕಾನ,ಹಿತೇಶ್ ಕುಮಾರ್ ನೀರ್ಚಾಲ್,ನಾರಾಯಣ ನಾಯ್ಕ್ ಕುದುಕ್ಕೋಳಿ ಸ್ವರಚಿತ ಕವಿತೆ ವಾಚನಗೈದರು.


          ಕಾರ್ಯಕ್ರಮದಂಗವಾಗಿ ಗಡಿನಾಡ ಕೋಗಿಲೆ ವಸಂತ ಬಾರಡ್ಕ ಅವರ ನೇತೃತ್ವದಲ್ಲಿ ಶ್ರೀವಾರಿ ಮ್ಯೂಸಿಕ್ ಟ್ರೂಫ್ ನ ರಂಜಿತ್ ದೇಲಂಪಾಡಿ, ಶೇಖರ ಪೂಜಾರಿ ಅರಿಯಾಳ, ಉದಯೋನ್ಮುಖ ಗಾಯಕರಾದ ಆಶೋಕ್ ಖಂಡಿಗೆ,ಶ್ವೇತಾ ಖಂಡಿಗೆ, ಬಾಲಕೃಷ್ಣ ಅಳಿಕೆ, ರೇವತಿ ವಾಣಿನಗರ  ಭಕ್ತಿ ಭಾವಗಾನ ಹಾಡಿ ರಂಜಿಸಿದರು.ಶ್ವೇತಾ ಪ್ರಾರ್ಥನೆಗೈದರು. ವನಜಾಕ್ಷಿ ಚಂಬ್ರಕಾನ ಸ್ವಾಗತಿಸಿ  ಸುಂದರ ಬಾರಡ್ಕ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries