HEALTH TIPS

ಫೆ.28 ರಂದು ಬದಿಯಡ್ಕದಲ್ಲಿ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ


         ಬದಿಯಡ್ಕ: ಶ್ರೀ ಬೆಂಕಿನಾಥೇಶ್ವರ ಕೃಪಾಪೆÇೀಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ- ಕಳವಾರು ಮೇಳದವರಿಂದ ಫೆ.28ರಂದು ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ವಿಜಿತ್ ಕುಮಾರ್ ಶೆಟ್ಟಿ ಆಕಾಶಭವನ ವಿರಚಿತ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ 6.30ರಿಂದ ಕಾಲಮಿತಿಯ ಯಕ್ಷಗಾನ ಅರಂಭವಾಗಲಿದೆ. ಭಕ್ತಿಭಾವಗಳಿಂದ ಮೈನವಿರೇಳಿಸುವ ಅಭಿನಯದೊಂದಿಗೆ ಕಲಾವಿದರು ಈ ಪೌರಾಣಿಕ ಪ್ರಸಂಗಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಕ್ಷರಂಗದ ಕ್ರಾಂತಿಪುರುಷ ಡಿ.ಮನೋಹರ್ ಕುಮಾರ್, ಹಾಸ್ಯಮಾಂತ್ರಿಕ ಸಂದೇಶ್ ಬಡಗಬೆಳ್ಳೂರು ಹಾಗೂ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ಜೀವತುಂಬಲಿದ್ದಾರೆ.
       ಕಲಾಭಿಮಾನಿಗಳು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries