ಕೋಝಿಕ್ಕೋಡ್: ಶಬರಿಮಲೆ ಹತ್ತಿದ ಕಾರಣ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಕಾರ್ಯಕರ್ತೆ ಬಿಂದು ಅಮ್ಮಿಣಿ ದೂರಿದ್ದಾರೆ.
ಇನ್ನೂ ಬಸ್ಗಳಲ್ಲಿ ತನ್ನನ್ನು ಹತ್ತಿಸುತ್ತಿಲ್ಲ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಕೋಝಿಕ್ಕೋಡ್ ಮಾರ್ಗದ ಕೃತಿಕಾ ಲಿಮಿಟೆಡ್ ಸ್ಟಾಪ್ ಬಸ್ ಗೆ ಹತ್ತಿಸದ ಕಾರಣ ನೋವಾಗಿದೆ ಎಂದು ಬಿಂದು ಅಮ್ಮಿನಿ ಫೇಸ್ ಬುಕ್ ಪೆÇೀಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಬೇರೊಬ್ಬ ಪ್ರಯಾಣಿಕ ಪೆÇಯಿಲ್ಕಾವ್ ಬಸ್ ನಿಲ್ದಾಣದಲ್ಲಿ ಕೈ ತೋರಿಸಿ ಬಸ್ ನಿಲ್ಲಿಸಿದರು. ಈ ವೇಳೆ ಬಸ್ ಹತ್ತಲು ಮುಂದಾದಾಗ ಚಾಲಕ ಇದ್ದಕ್ಕಿದ್ದಂತೆ ಬಸ್ ಮುಂದೆ ಚಲಾಯಿಸಿದರು. ನನ್ನ ಜೊತೆಗಿದ್ದ ಪೆÇೀಲೀಸರಲ್ಲಿ ಓರ್ವರಿಗೆ ಪರಿಚಿತ ಡ್ರೈವರ್ ಆಗಿದ್ದರು. ಮತ್ತು ಅವರು ಹೇಳಿದ ಮೇಲೆ ಬಸ್ಸು ನಿಲ್ಲಿಸಲಾಯಿತು. ಆಗ ಆ ಚಾಲಕ ನಿನ್ನನ್ನು ತಿಳಿದಿದ್ದು ದ್ವೇಷವಿದೆ ಎಂದು ಹೇಳಿದರು. ಮತ್ತು ಈ ಅನ್ಯಾಯದ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗುವೆ ಎಂದು ಹೇಳುವವರಿಗೆ, ನಾನು ಪ್ರತಿದಿನ ನನ್ನ ಪ್ರಕರಣಕ್ಕಾಗಿ ನ್ಯಾಯಾಲಯಕ್ಕೆ ಹೋಗಬೇಕಾಗಬಹುದು ಎಂದು ಹೇಳಿದೆ ಎಂದು ಬಿಂದು ಅಮ್ಮಿಣಿ ಹೇಳಿದ್ದಾಳೆ.
ಶಬರಿಮಲೆ ಹತ್ತಿದಂದಿನಿಂದ ಇಂದಿಗೂ ಬಸ್ಗಳಲ್ಲಿ ಪ್ರವೇಶಿಸಲು ಬಿಡುತ್ತಿಲ್ಲ: ಬಿಂದು ಅಮ್ಮಿಣಿ
0
February 14, 2023