ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಕ ಸಾ ಪ ಕೇರಳ ಗಡಿನಾಡ ಘಟಕದ ಕಛೇರಿಗೆ ಭೇಟಿ ನೀಡಿದರು. ಘಟಕದ ಕಾರ್ಯಕ್ರಮಗಳ ವಿವರಗಳನ್ನು ಪರಿಶೀಲಿಸಿದ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ಹಿರಿಯ ಸದಸ್ಯ ನಿಕಟ ಪೂರ್ವ ಅಧ್ಯಕ್ಷ, ವಕೀಲ ಐ ವಿ ಭಟ್ ಮತ್ತು ನಿಕಟ ಪೂರ್ವ ಗೌರವ ಕೋಶಾಧ್ಯಕ್ಷ ಸುಕುಮಾರ ಆಲಂಪಾಡಿ ಅವರನ್ನು ಶಾಲು ಹೊದಿಸಿ ಗೌರವಿಸಿದರು . ಕ ಸಾ ಪ ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ ಮುರಳೀ ಮೋಹನ್ ಚೂಂತಾರು, ಡಾ. ಜಯಪ್ರಕಾಶ ತೊಟ್ಟೆತ್ತೋಡಿ, ಡಾ ರಾಜಗೋಪಾಲ್ ಕಾಸರಗೋಡು, ಡಾ ಪ್ರಸನ್ನ ರೈ, ಗಣೇಶ್ ಪಾಣೂರು, ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ,ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಅಸೌಖ್ಯದಿಂದ ವಿಶ್ರಾಂತಿಯಲ್ಲಿರುವ ಕ ಸಾ ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.
ಕಸಾಪ ಕೇಂದ್ರ ಸಮಿತಿ ಅಧ್ಯಕ್ಷರಿಂದ ಗಡಿನಾಡ ಘಟಕ ಕಚೇರಿಗೆ ಭೇಟಿ
0
February 27, 2023
Tags