HEALTH TIPS

ಮುಕ್ಕುಂಜ ಶ್ರೀ ಪೂಮಾಣಿ-ಕಿನ್ನಿಮಾಣಿ, ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ತುಳುಲಿಪಿ ನಾಮಫಲಕ ಅನಾವರಣ


           ಮುಳ್ಳೇರಿಯ: ಬೆಳ್ಳೂರು ಮುಕ್ಕುಂಜ ಶ್ರೀಪೂಮಾಣಿ-ಕಿನ್ನಿಮಾಣಿ, ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಪಾಕ ಶಾಲೆಯ ಉದ್ಘಾಟನೆ ಹಾಗೂ ನೇಮೋತ್ಸವದ ಸಂದರ್ಭದಲ್ಲಿ ತುಳುಲಿಪಿ ನಾಮಫಲಕ ಅನಾವರಣ ನಡೆಯಿತು.
          ದೇವಸ್ಥಾನದಲ್ಲಿ ತುಳುಲಿಪಿ ನಾಮಫಲಕದ ಉದ್ಘಾಟನೆಯನ್ನು ಮುಕ್ಕುಂಜ ಕ್ಷೇತ್ರದ ಆಡಳಿತಾಧಿಕಾರಿ ಶಂಕರ ಕಡಂಬಳಿತ್ತಾಯ ನೆರವೇರಿಸಿದರು. ಜೈ ತುಳುನಾಡ್ ಸಂಘಟನೆಯ ಉಪಾಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು, ಜೈ ತುಳುನಾಡ್ ಕಾಸರಗೋಡು ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ಮುಕ್ಕುಂಜ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಸುವರ್ಣ ಮತ್ತು ಸದಸ್ಯರು ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.



            ಮುಕ್ಕುಂಜ ಶ್ರೀ ಪೂಮಾಣಿ ಕಿನ್ನಿಮಾಣಿ, ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ತುಳುಲಿಪಿ ನಾಮಫಲಕ ಅಳವಡಿಕೆ ಮಾಡಿದ ಮುಕ್ಕುಂಜ ಕ್ಷೇತ್ರದ ಆಡಳಿತಾಧಿಕಾರಿ ಶಂಕರ ಕಡಂಬಳಿತ್ತಾಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸಂಘಟನೆಯ ಪದಾಧಿಕಾರಿಗಳು ಅಭಿನಂದಿಸಿರು.
          ಜಾನಪದ ಹಾಗೂ ನಾಟಕ ಕಲಾವಿದ ಚಂದ್ರಶೇಖರ ಆಚಾರ್ಯ ನಾಟೆಕಲ್ಲು ಸ್ವಾಗತಿಸಿ, ಬೆಳ್ಳೂರು ಗ್ರಾಮ ಪಂಚಾಯತಿ ಸದಸ್ಯ ಶ್ರೀಪತಿ ಕಡಂಬಳಿತ್ತಾಯ ವಂದಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries