ಮುಳ್ಳೇರಿಯ: ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ನೀಡುವ 2022-23ರ ಸಾಲಿನ ಶೈಕ್ಷಣಿಕ ವಿದ್ಯಾರ್ಥಿವೇತನಕ್ಕೆ ಅಡೂರು ವಿದ್ಯಾಭಾರತಿ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿನಿ ತ್ರಿಷಾ ಪಿ ಆಯ್ಕೆಯಾಗಿದ್ದಾಳೆ.
ಈಕೆ ಪಠ್ಯದ ಜತೆಗೆ ಕ್ರೀಡೆ ಮತ್ತು ಚಿತ್ರಕಲೆಯಲ್ಲೂ ಚತುರೆಯಾಗಿದ್ದಾಳೆ. ಇವಳು ಅಡೂರು ದೇವರಡ್ಕದ ಪೆÇಯ್ಯೆಮಜಲ್ ಶ್ರೀಧರ ಮತ್ತು ರೇಖಾ ದಂಪತಿಯ ಪುತ್ರಿ. 2023ರ ಮಾರ್ಚ್ 3ರಂದು ನಡೆಯುವ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.ಚಿತ್ರ: 26 ಬಿಎ ವಿದ್ಯಾಪೀಠ
ಅಡೂರು ಬಾಲಕೃಷ್ಣ ತಂತ್ರಿ ವಿದ್ಯಾರ್ಥಿವೇತನಕ್ಕೆ ತ್ರಿಷಾ ಪಿ ಆಯ್ಕೆ
0
ಫೆಬ್ರವರಿ 26, 2023


