ತಿರುವನಂತಪುರ: ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರು ಇದೇ 17ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲಿದ್ದಾರೆ.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮುಷ್ಕರ ನಡೆಯಲಿದೆÀ. ಒಪಿ ವಿಭಾಗ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಶಸ್ತ್ರಚಿಕಿತ್ಸೆಗಳು, ತುರ್ತು ವಿಭಾಗಗಳು ಮತ್ತು ಐಸಿಯುಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
ಕೋಝಿಕ್ಕೋಡ್ನ ಫಾತಿಮಾ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ. ಕೆಲ ವೈದ್ಯರಿಗೆ ಥಳಿಸಬೇಕು ಎಂಬ ಶಾಸಕ ಕೆ.ಬಿ.ಗಣೇಶ್ ಕುಮಾರ್ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಐಎಂಎ ಪದಾಧಿಕಾರಿಗಳು ಘೋಷಿಸಿರುವರು.
17ರಂದು ರಾಜ್ಯಾದ್ಯಂತ ವೈದ್ಯರ ಮುಷ್ಕರ: ಒ.ಪಿ. ವಿಭಾಗಕ್ಕೂ ತಟ್ಟಲಿದೆ ಬಿಸಿ: ಗಣೇಶ್ ಕುಮಾರ್ ಶಾಸಕರ ವಿರುದ್ಧವೂ ಕ್ರಮಕ್ಕೆ ಐಎಂಎ ಕಾನೂನು ಕ್ರಮಕ್ಕೆ
0
March 14, 2023