ಕುಂಬಳೆ: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ವೈದಿಕ ಕಾರ್ಯಕ್ರಮದ ನೇತೃತ್ವವನ್ನು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ನಡೆಯಿತು. ನೂತನ ಆಡಳಿತ ಮೊಕ್ತೇಸರ್ ಎ. ರಮೇಶ್ ರೈ ಕೋಟೆಕುಂಜ, ಮೊಕ್ತೇಸರರಾದ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಅನಂತವಿಷ್ಣು ಹೇರಳ ಉಡುವ, ಪಿ. ರಾಮಪ್ರಸಾದ್ ಬಲ್ಲಾಳ್ ಚಿಪ್ಪಾರು, ಶೀನ ಶೆಟ್ಟಿ ಬಳ್ಳೂರು, ಮಾಜಿ ಆಡಳಿತ ಮೊಕ್ತೇಸರ್ ಕೋಟೆಕುಂಜ ಮಂಜುನಾಥ ರೈ, ಲಕ್ಷ್ಮಣ ನೋಂಡ ಕೋಟೆಕುಂಜ, ವಾಸುದೇವ ಕಾರಂತ ಉಜಿರೆಕೆರೆ, ಮೋಹನ್ ಆಳ್ವ ಕೋಟೆಕುಂಜ, ಡಾ.ಕರುಣಾಕರ ಆಳ್ವ ಕೋಟೆಕುಂಜ, ಕಿಶೋರ್ ಹೇರಳ ಉಡುವ, ಶಂಕರ ನಾರಾಯಣ ಹೇರಳ ಉಡುವ, ಭೋಜರಾಜ ಆಚಾರ್ಯ ದೇಶಮಂಗಲ, ಶಿವಶಂಕರ ಆಳ್ವ ಕೋಟೆಕುಂಜ, ದೇರಣ್ಣ ರೈ ಕಂಬಾರು, ರಾಧಾಕೃಷ್ಣ ಶೆಟ್ಟಿ ಬಳ್ಳೂರು, ಚಂದ್ರಹಾಸ ಶೆಟ್ಟಿ ಮಜಲು, ರಾಜೇಶ್ ಶೆಟ್ಟಿ ಮಂಟಮೆ, ಗಣೇಶ ಶೆಟ್ಟಿ ಕಂಬಾರು, ಬಾಲ ಪಾಟಾಳಿ ಮಜಲು, ಸುಂದರ ದೇವಾಡಿಗ ಬೆದ್ರಡ್ಕ, ರಾಜೇಶ್ ಶೆಟ್ಟಿ ಬಳ್ಳೂರು, ರತೀಶ್ ಶೆಟ್ಟಿ ಬಳ್ಳೂರು, ಸತೀಶ್ ಶೆಟ್ಟಿ ಮಂಟಮೆ, ಪ್ರಭಾಕರ ಕಾರಂತ ದೇಶಮಂಗಲ, ಪ್ರಸನ್ನ ಕಾರಂತ ದೇಶಮಂಗಲ, ರಾಜೇಶ್ ಕಾರಂತ ಉಜಿರೆಕೆರೆ, ಉದಯ ದೇವಾಡಿಗ ಉಜಿರೆಕೆರೆ, ಜಯರಾಮ ರೈ ಶಿರಬಾಗಿಲು, ಜಗದೀಶ ಆಚಾರ್ಯ ಕಂಬಾರು, ಲೋಕೇಶ್ ಎಂ.ಬಿ ಆಚಾರ್ ಕಂಬಾರು ಉಪಸ್ಥಿತರಿದ್ದರು.
ನೂತನ ಆಡಳಿತ ಮೊಕ್ತೇಸರ:
ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಕೋಟೆಕುಂಜ ರಮೇಶ ರೈ ಅವರು ಆಡಳಿತ ಮೊಕ್ತೇಸರರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು. ಸಭೆಯಲ್ಲಿ ತಂತ್ರಿವರ್ಯ ಬೃಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಮಾಜಿ ಆಡಳಿತ ಮೊಕ್ತೇಸರ ಕೋಟೆಕುಂಜ ಮಂಜುನಾಥ ರೈ ಉಪಸ್ಥಿತರಿದ್ದರು. ಮಲಬಾರ್ ದೇವಸ್ವಂ ಬೋರ್ಡ್ ಇನ್ಸ್ಪೆಕ್ಟರ್ ಮಧು ಸಭೆ ನಿರ್ವಹಿಸಿದರು.
ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ, ಶ್ರೀಸತ್ಯನಾರಾಯಣ ಪೂಜೆ
0
March 14, 2023