ಬದಿಯಡ್ಕ: ಪಳ್ಳತ್ತಡ್ಕದ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮಹೋತ್ಸವ ಮಾ. 18 ಮತ್ತು 19ರಂದು ಜರಗಲಿದೆ. 18 ರಂದು ಬೆಳಗ್ಗೆ 9ಕ್ಕೆ ಮೇಲೇರಿ(ಕಟ್ಟಿಗೆ) ಸೇರಿಸುವುದು, ಸಂಜೆ 6.30 ಕ್ಕೆ ಪಳ್ಳತ್ತಡ್ಕ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ಕ್ಷೇತ್ರದಿಂದ ಭಂಡಾರ ಹೊರಡುವುದು, 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 11.30 ಕ್ಕೆ ಶ್ರೀ ದೈವದ ಕುಳಿಚ್ಚಾಟ್ಟ, 19 ರಂದು ಬೆಳಗ್ಗೆ 4 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಕೆಂಡಸೇವೆ, ಅರಶಿನ ಹುಡಿ ಪ್ರಸಾದ ವಿತರಣೆ ಇರುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 18ರಂದು ಸಂಜೆ 7 ರಿಂದ ನೃತ್ಯ ವೈವಿದ್ಯ, ಸ್ಥಳೀಯ ಮಹಿಳೆಯರಿಂದ ತಿರುವಾದಿರ ನೃತ್ಯ, ಅಪೇಕ್ಷ ಪೈ ಬಳ್ಳಂಬೆಟ್ಟು ಬಳಗದವರಿಂದ ಭಕ್ತಿ ರಸಮಂಜರಿ, ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.