HEALTH TIPS

ಜೀವನಬೋಧ ವಿದ್ಯಾರ್ಥಿ ಶಿಬಿರ 2023 ವಿಚಾರ ವಿನಿಮಯ ಸಭೆ


               ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ನೇತೃತ್ವದಲ್ಲಿ ವಿದ್ಯಾರ್ಥಿವಾಹಿನಿ ಸಂಯೋಜನೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇ. 28 ರಿಂದ ಮೇ1 ರವರೆಗೆ ಜರಗಲಿರುವ ಜೀವನಬೋಧ ವಿದ್ಯಾರ್ಥಿ ಶಿಬಿರದ ವಿಚಾರ ವಿನಿಮಯ ಸಭೆ ಶ್ರೀ ಭಾರತೀ ವಿದ್ಯಾಪೀಠದಲ್ಲಿ  ಜರಗಿತು.



           ಸಭೆಯಲ್ಲಿ ಶಿಬಿರದ ಯಶಸ್ವಿಗಾಗಿ ಕೈಗೊಳ್ಳಬೇಕಾದ ವಿಭಾಗವಾರು ವಿಷಯಗಳ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು.  ಶಿಬಿರಾಧಿಕಾರಿ ಮತ್ತು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ  ಶಾಮಪ್ರಸಾದ ಕುಳಮರ್ವ ಶಿಬಿರದ ಸಮಗ್ರ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಇವರು ಶಿಬಿರದ ಬಗ್ಗೆ ಮುಂದೆ ಕಾರ್ಯಗತಗೊಳಿಸಬೇಕಾದ ವಿಷಯಗಳ ಬಗ್ಗೆ ಪ್ರಸ್ತಾಪಮಾಡಿದರು.
           ಡಾ ವೈ ವಿ ಕೃಷ್ಣಮೂರ್ತಿ  ಶಿಬಿರದ ವ್ಯವಸ್ಥೆಗಳ ಬಗ್ಗೆ ವಿವರಣೆಗಳನ್ನಿತ್ತರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಗೀತಾಲಕ್ಷ್ಮಿ ಮುಳ್ಳೇರಿಯಾ, ಕುಸುಮಾ ಪೆರ್ಮುಖ ಸಲಹೆ ಸೂಚನೆಗಳನ್ನಿತ್ತರು. ಮಂಡಲ, ವಲಯ ಪದಾಧಿಕಾರಿಗಳು  ಉಪಸ್ಥಿತರಿದ್ದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries