ಬದಿಯಡ್ಕ: ಮಾನ್ಯ ಕೆಂಪುಕಲ್ಲು ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಏ. 8 ಶನಿವಾರ ಮಾನ್ಯ ಶಾಲಾ ಮೈದಾನದಲ್ಲಿ ನಡೆಯಲಿರುವುದು. ರಾತ್ರಿ 8 ಗಂಟೆಗೆ ಏಷ್ಯನ್ ಗೇಮ್ ಗೋಲ್ಡ್ ಮೆಡಲಿಸ್ಟ್, ಪೆÇ್ರ ಕಬಡ್ಡಿ ತರಬೇತುದಾರ ಜಗದೀಶ್ ಕುಂಬಳೆ ಪಂದ್ಯಾಟವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಕೆಂಪು ಕಲ್ಲು ವಲಯದ ಹಿರಿಯ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಜರಗಲಿರುವುದು. ಸೀಮಿತ ತಂಡಗಳು ಭಾಗವಹಿಸುವ ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ 30,030 ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ 15,015 ಮತ್ತು ಟ್ರೋಪಿ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ರೂ 5050 ಹಾಗೂ ಟ್ರೋಫಿ ನೀಡಲಾಗುವುದು.
ಏಪ್ರಿಲ್ 8ರಂದು ಮಾನ್ಯದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
0
April 07, 2023
Tags