ಕಾಸರಗೋಡು: ಕುಂಬಳೆ ಸೀಮೆಯಲ್ಲಿ ಪ್ರಾಚೀನ ಚರಿತ್ರೆಯನ್ನು ಹೊಂದಿರುವ ಪಂಡಿತ ಪರಂಪರೆಯ ಶ್ರೇಷ್ಠ ಕೊಂಡಿಗಳಾಗಿರುವ ಕಾವು ತ್ರಿವಿಕ್ರಮ ಪಂಡಿತಾಚಾರ್ಯ, ನಾರಾಯಯಣ ಪಂಡಿತಾಚಾರ್ಯ, ವಾಮನ ಪಂಡಿತಾಚಾರ್ಯರಿಂದ ಪೂಜಿಸಲ್ಪಟ್ಟ ಕಾವುಗೋಳಿ ಶಿವ ಕ್ಷೇತ್ರದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳ ಧÀರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 5 ಲಕ್ಷ ರೂ. ಗಳ ದೇಣಿಗೆಯನ್ನು ನೀಡಿದರು. ಕಾವು ಪ್ರಣವ ವಾಸುದೇವ, ಶರ್ಮದಾ ಪ್ರಣವ, ನ್ಯಾಯವಾದಿ ಸುರೇಶ್, ಸಂಘಟಕ ಕೆ.ಜಗದೀಶ್ ಕೂಡ್ಲು ಅವರಿಗೆ ದರ್ಮಸ್ಥಳದಲ್ಲಿ ಹೆಗ್ಗಡೆಯವರು ಹಸ್ತಾಂತರಿಸಿದರು.
ಕಾವುಗೋಳಿ ಶಿವ ಕ್ಷೇತ್ರಕ್ಕೆ ಧನಸಹಾಯ ಹಸ್ತಾಂತರ
0
April 18, 2023