ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಕುಸ್ತಿಪಟುಗಳನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ, ಎಫ್ಐಆರ್ ದಾಖಲಾದರೂ ಅದರ ಪ್ರತಿಯನ್ನು ನೀಡದಿದ್ದಕ್ಕೆ ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಕುಸ್ತಿಪಟುಗಳನ ಅಹವಾಲು ಆಲಿಸಿದ ಅವರು, ಬಳಿಕ ಅವರನ್ನು ತಬ್ಬಿ ಸಂತೈಸಿದರು.
- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನಾಯಕಿಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪಗಳಿವೆ. ಮೊದಲು ಅವರು ರಾಜೀನಾಮೆ ನೀಡಬೇಕಿತ್ತು, ಅಥವಾ ಕಿತ್ತು ಹಾಕಬೇಕಿತ್ತು. ಈಗಲೂ ಅವರು ಆ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಒತ್ತಡ ಹಾಗೂ ಜನರ ವೃತ್ತಿಜೀವನನ್ನೇ ಹಾಳು ಮಾಡಲಿದ್ದಾರೆ.ಕುಸ್ತಿಪಟುಗಳನ್ನು ಸಂತೈಸುತ್ತಿರುವ ಪ್ರಿಯಾಂಕಾ ಗಾಂಧಿ 'ನನಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ನಿರೀಕ್ಷೆ ಇಲ್ಲ. ಒಂದು ವೇಳೆ ಅವರಿಗೆ ಈ ಕುಸ್ತಿಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಯಾಕೆ ಈವರೆಗೂ ಅವರನ್ನು ಕರೆಸಿ ಮಾತನಾಡಿಸಿಲ್ಲ? ಯಾಕೆ ಸರ್ಕಾರ ಬ್ರಿಜ್ ಭೂಷಣ್ ಶರಣ್ ಸಿಂಗ್ರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ವಿನೀಶಾ ಪೋಗಟ್ ತಲೆ ಸವರುತ್ತಿರುವ ಪ್ರಿಯಾಂಕಾ ಗಾಂಧಿ 'ಈ ಹುಡುಗಿಯರು ಪದಕ ಗೆದ್ದಾಗ, ಎಲ್ಲರೂ ಟ್ವೀಟ್ ಮಾಡಿ, ಇವರು ದೇಶದ ಹೆಮ್ಮೆ ಎಂದು ಹೇಳಿಕೊಂಡರು. ಆದರೆ ಇವರು ಬೀದಿಯಲ್ಲಿ ಕುಳಿತು ನಮ್ಮ ಮಾತು ಕೇಳಿ ಎಂದು ಹೇಳಿದಾಗ, ಯಾರೂ ಕೇಳಲು ತಯಾರಿಲ್ಲ. ಒಂದು ವೇಳೆ ಎಫ್ಐಆರ್ ದಾಖಲಾಗಿದ್ದರೆ, ಅದರ ಪ್ರತಿಯನ್ನು ಇವರೊಂದಿಗೆ ಹಂಚಿಕೊಳ್ಳಬೇಕಿತ್ತು' ಎಂದು ಹೇಳಿದರು.
ಪ್ರಿಭಟನಾ ನಿರತ ಕುಸ್ತಿಪಟುಗಳೊಂದಿಗೆ ಚರ್ಚಿಸುತ್ತಿರುವ ಪ್ರಿಯಾಂಕಾ ಗಾಂಧಿ